ರಾಜ್ಯ ವಾರ್ತೆಸ್ಥಳೀಯ

ಕೊನೆಗೂ ‘ಮಕ್ನಾ’ ಪುಂಡಾನೆ ಸೆರೆ! ಮೂವರನ್ನು ಬಲಿ ಪಡೆದಿದ್ದ ಆನೆ Elephant!!

ಮೂವರನ್ನು ಬಲಿ ಪಡೆದು, ಪುಂಡಾಟ ಮೆರೆಯುತ್ತಿದ್ದ ಕಾಡಾನೆ (Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮೂವರನ್ನು ಬಲಿ ಪಡೆದು, ಪುಂಡಾಟ ಮೆರೆಯುತ್ತಿದ್ದ ಕಾಡಾನೆ (Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

maithri

ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಸಾಕಾನೆ ಭೀಮ, ಮಹೇಂದ್ರ ನೆರವಿನಲ್ಲಿ ಮಕ್ನಾ ಆನೆಯನ್ನು ಸೆರೆ ಹಿಡಿಯಲಾಗಿದೆ. ಡ್ರೋನ್ ಮೂಲಕ ಮಕ್ನಾ ಇರುವ ಸ್ಥಳ ಗುರುತಿಸಿದ್ದ ಅರಣ್ಯ ಅಧಿಕಾರಿಗಳು ನಂತರ ಮಕ್ನಾ ಆನೆಯನ್ನು ಸಾಕಾನೆಗಳು, ಮಾವುತರು ಸುತ್ತುವರೆದಿದ್ದಾರೆ. ಮಾವುತರು, ಕಾವಾಡಿಗರ ಮಾಹಿತಿ ಆಧರಿಸಿ ವೈದ್ಯರ ತಂಡ ಕೂಡ ಬಂದಿತ್ತು.

ಪಶುವೈದ್ಯ, ಶಾರ್ಪ್ಶೂಟರ್ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಒಂದು ಕಿ.ಮೀ. ಸಾಗಿದ್ದ ಮಕ್ನಾ ಆನೆ ನಂತರ ನಿತ್ರಾಣಗೊಂಡಿತ್ತು. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಬಿಡಾರಕ್ಕೆ ಮಕ್ನಾ ಶಿಫ್ಟ್ ಮಾಡಲಾಗಿದೆ.

ಅರಣ್ಯ ಸಿಬ್ಬಂದಿ ವಾಹನದ ಹಿಂಬಾಲಿಸಿ ದಾಳಿಗೆ ಮುಂದಾಗಿತ್ತು. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆರ್.ಎಸ್.ಎಸ್. ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಮೋಹನ್ ಭಾಗವತ್’ಗೆ ಪತ್ರ ಬರೆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ!

ತಾನು ಗೃಹ ಸಚಿವನಾಗಿ ಇರುವವರೆಗೂ ಕರ್ನಾಟಕದಲ್ಲಿ ಆರ್.ಎಸ್.ಎಸ್. ಪಥಸಂಚಲನಕ್ಕೆ ಅನುಮತಿ ಕಡ್ಡಾಯ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

1 of 158