ಪುತ್ತೂರು: ಬೋಟ್ ಅಂದರೆ ಸಣ್ಣ ಶಿಪ್. ಸಮುದ್ರದಲ್ಲಿ ತೇಲಾಡುತ್ತದೆ. ನೈಸರ್ಗಿಕ ಆಹಾರವೇ ಇಲ್ಲಿನ ಸೊಬಗು. ಅದೇ ರೀತಿ – ದ ಬೋಟ್ ಹೌಸ್.
ದ ಬೋಟ್ ಹೌಸ್ ಪುತ್ತೂರಿಗೆ ಕಾಲಿಟ್ಟಿದೆ. ಹಾಗೆಂದು ಬೋಟ್ ಬಂದಿದೆಯೇ ಎಂದು ಹುಬ್ಬೇರಿಸಬೇಡಿ. ಸಮುದ್ರದ ಬೋಟಿನ ಕಲ್ಪನೆಯಲ್ಲಿ ನೈಸರ್ಗಿಕ ಸವಿ ಉಣಿಸಲು ಪುತ್ತೂರು ಎಪಿಎಂಸಿ ರಸ್ತೆಯ ತ್ರಿನೇತ್ರ ಕಾಂಪ್ಲೆಕ್ಸ್’ನಲ್ಲಿ ‘ದ ಬೋಟ್ ಹೌಸ್’ ಆರಂಭಗೊಂಡಿದೆ.

ಫಿಜ್ಜಾ, ಜ್ಯೂಸ್, ಮಿಲ್ಕ್ ಶೇಕ್, ಫಲೂದಾ, ಮೋಮೊಸ್, ಸ್ಯಾಂಡ್ ವಿಚ್, ಐಸ್’ಕ್ರೀಮ್ ಸೇರಿದಂತೆ ಹಲವು ಅಪ್ಪಟ ಸಾವಯವ ಆಹಾರಗಳ ಕೆಫೆ ಇದು.
ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ.ನ ಗೋಪಾಲಕೃಷ್ಣ ಮಾತನಾಡಿ, ಶುದ್ಧ ಆಹಾರ ಉತ್ಪನ್ನಗಳನ್ನು ಪುತ್ತೂರಿನ ಮಟ್ಟಿಗೆ ಮರಿಕೆಯಲ್ಲಿ ಕಾಣಲು ಸಾಧ್ಯ. ಸುಲಭಸಾಧ್ಯವಾಗಿ ಸಿಗಲು ಸುಹಾಸ್ ಕಾರಣರು. ಸಾವಯವ ಕೃಷಿಯಲ್ಲಿ ಸದಾಶಿವ ಮರಿಕೆ ಅವರ ಕೆಲಸ ಇಲ್ಲಿಗೆ ಪೂರಕ. ಇದೀಗ ಕೂತು ತಿನ್ನುವ ಪ್ರಯತ್ನ. ರಾಸಾಯನಿಕ ಪ್ರೇರಿತ ಹಾಗೂ ಪೂರಿತ ಕಾಲಘಟ್ಟದಲ್ಲಿ ರಾಸಾಯನಿಕ ರಹಿತ ಉತ್ಪನ್ನ ತಯಾರಿಸಿ, ಸಮಾಜಕ್ಕೆ ನೀಡಬೇಕು, ಜನರ ಆರೋಗ್ಯ ವೃದ್ಧಿಸಬೇಕು ಎನ್ನುವ ಆಲೋಚನೆ ಅವರದ್ದು. ಬೋಟ್ ಹೌಸ್ ಶಿಪ್ ಹೌಸ್’ನಷ್ಟು ಬೆಳೆಯಲಿ. ಇಲ್ಲಿನ ಉತ್ಪನ್ನ ಬೆಳೆಯಲಿ ಎಂದು ಹಾರೈಸಿದರು.
ತ್ರಿನೇತ್ರ ಕಾಂಪ್ಲೆಕ್ಸ್ ಪಾಲುದಾರ ವೆಂಕಟೇಶ್ ಭಟ್ ಮಾತನಾಡಿ, ಯುಗಾದಿಯ ಶುಭದಿನ ದ ಬೋಟ್ ಹೌಸ್ ಆರಂಭಗೊಂಡಿದೆ. ಪುತ್ತೂರಿಗೆ ಇದರಿಂದ ಒಳ್ಳೆಯದಾಗಲಿ. ಜನರು ಅಚ್ಚುಕಟ್ಟಾದ ಆಹಾರ ಸವಿಯುವಂತಾಗಲಿ ಎಂದು ಹಾರೈಸಿದರು.
ತ್ರಿನೇತ್ರ ಕಾಂಪ್ಲೆಕ್ಸ್ ಪಾಲುದಾರ ಗಿರಿಧರ್ ಹೆಗ್ಡೆ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮಾಲಕ ಕೃಷ್ಣ ಕುಮಾರ್ ಈಂದುಗುಳಿ, ಐಟಿ ಉದ್ಯೋಗಿಯಾಗಿದ್ದ ನಾನು, ಆಹಾರ ಪದ್ಧತಿಯಿಂದ ಆರೋಗ್ಯ ಕೆಡಿಸಿಕೊಂಡೆ. ಸೈಕ್ಲಿಂಗ್ ನನ್ನ ಹವ್ಯಾಸವಾಗಿದ್ದು, ಒಮ್ಮೆ ಸೈಕ್ಲಿಂಗ್ ಹೋಗುತ್ತಿದ್ದಾಗ ಸಾವಯವ ಆಹಾರದ ಬಗ್ಗೆ ಆಲೋಚಿಸಿದೆ. ಆಹ ಹುಟ್ಟಿಕೊಂಡಿದ್ದೇ ದ ಬೋಟ್ ಹೌಸ್ ಕಲ್ಪನೆ. ಮೈದಾ ಬಳಕೆಗೆ ಗುಡ್ ಬಾಯ್ ಹೇಳಿ ಅದರ ಬದಲಾಗಿ ಗೋಧಿ ಉಪಯೋಗಿಸಲಾಗಿದೆ. ಸಾವಯವ ವಸ್ತುಗಳನ್ನೇ ಬಳಸಿ ಆಹಾರ ತಯಾರಿಸಿರುವುದು ಇಲ್ಲಿನ ವಿಶೇಷ ಎಂದರು.
ಮರಿಕೆ ಸಾವಯವ ಮಳಿಗೆಯ ಸುಹಾಸ್ ಮರಿಕೆ ಸ್ವಾಗತಿಸಿ, ವಂದಿಸಿದರು. ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.