ಪುತ್ತೂರು: ಅಗ್ನಿಪಥ್ ನೇಮಕಾತಿಯಲ್ಲಿ ಭಾರತೀಯ ಭೂ ಸೇನೆಗೆ ನೇಮಕಗೊಂಡ ಅಭಿತ್ ಅವರಿಗೆ ಪುತ್ತೂರು ದೇವಾಂಗ ಸೇವಾ ಸಮಾಜದಿಂದ ಅಭಿನಂದಿಸಿ, ಸನ್ಮಾನಿಸಲಾಯಿತು.
ಮೊಟ್ಟೆತ್ತಡ್ಕ ಆಶ್ರಯ ಕಾಲನಿಯಲ್ಲಿರುವ ಅಭಿತ್ ಅವರ ಮನೆಗೆ ತೆರಳಿದ ಸಮಾಜದ ಪ್ರಮುಖರು, ಜೂನ್ 18ರಂದು ಶಾಲು, ಫಲಪುಷ್ಪ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ನೀಡಿ ಅಭಿನಂದಿಸಿದರು.
ಪುತ್ತೂರು ದೇವಾಂಗ ಸಮಾಜದ ಪ್ರಮುಖರು, ಅಭಿತ್ ಅವರ ಮನೆಯವರು ಉಪಸ್ಥಿತರಿದ್ದರು.






















