ದೇಶ

ಕೂಡಲೇ ಪಿಒಕೆ ತೆರವು ಮಾಡಿ: ಮತ್ತೆ ಎಚ್ಚರಿಕೆ ನೀಡಿದ ಭಾರತ

ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಭಾರತೀಯ ಸೇನಾಪಡೆಗಳು, ಪ್ರಧಾನಿ ನರೇಂದ್ರ ಮೋದಿ ಅನಂತರ, ಇದೀಗ ಕೇಂದ್ರ ವಿದೇ­ಶಾಂಗ ಸಚಿವಾಲಯವೂ ಪಾಕಿಸ್ಥಾನಕ್ಕೆ ಖಡಕ್‌ ಸಂದೇಶ ರವಾನಿಸಿದೆ.

maithri

ಜಮ್ಮು-ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ­ಯಿಲ್ಲ. ಪಾಕ್‌ ಆಕ್ರಮಿಸಿಕೊಂಡಿ­ರುವ ಕಾಶ್ಮೀರದ (ಪಿಒಕೆ) ಭಾಗವನ್ನು ಕೂಡಲೇ ತೆರವು ಮಾಡಬೇಕು ಎಂದು ಮಾಧ್ಯಮಗಳಿಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದರು.

ಕದನ ವಿರಾಮ ಏರ್ಪಟ್ಟ ಕುರಿತು ವಿವರಣೆ ನೀಡಿದ ಜೈಸ್ವಾಲ್‌, ಪಾಕಿಸ್ಥಾನದ ಡಿಜಿಎಂಒ (ಸೇನಾ ಕಾರ್ಯಾಚರಣೆ ನಿರ್ದೇಶಕ) ಭಾರತದ ಡಿಜಿ­ಎಂಒ ಜತೆಗೆ ಮಾತಾಡಿದ ನಂತರ ಸೇನಾ ದಾಳಿ ನಿಲ್ಲಿಸುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಸಿಂಧೂ ಒಪ್ಪಂದ ರದ್ದು ಮುಂದುವರಿಯುತ್ತದೆ

ಪಾಕ್‌ನೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮುಂದುವರಿಯುತ್ತದೆ. ಪಾಕ್‌ ಉಗ್ರವಾದ ನಿಲ್ಲಿಸುವವರೆಗೆ ಇದರಲ್ಲಿ ಬದಲಾವಣೆ­ಯಿಲ್ಲ ಎಂದು ಜೈಸ್ವಾಲ್‌ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಬಕ್ರೀದ್ ದಿನ ವಿಶಾಲ್ ಆಗಿ ಮತಾಂತರಗೊಂಡ ಬಿಲಾಲ್! ಮುಸ್ಲಿಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿ ರಾಮಚರಿತ ಮಾನಸ ಪಠಣ!

ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆಯಂದೇ ಬಿಲಾಲ್ ಎಂಬ ಮುಸ್ಲಿಂ ಯುವಕ ಹಿಂದೂ…