Gl
ಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಪರಿಸರ ದಿನಾಚರಣೆ | ಪ್ಲಾಸ್ಟಿಕ್’ನಿಂದ ಪರಿಸರ ಮತ್ತು ಆರೋಗ್ಯ ಹಾನಿ : ಉಲ್ಲಾಸ್ ಕೆ.

ಮಣ್ಣಿನ ಸಂರಕ್ಷಣೆಯಾಗಬೇಕಾದರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಬೇಕು. ಆದರೆ ನಮ್ಮ ದಿನಚರಿ ಆರಂಭವಾಗುವುದೇ ಹಲ್ಲುಜ್ಜುವ ಪ್ಲಾಸ್ಟಿಕ್ ಬ್ರಷ್ನಿಂದ. ಸೌಂದರ್ಯ ವರ್ಧಕಗಳು, ಫೇಸ್ ಮಾಸ್ಕ್, ತಿನ್ನುವ ಆಹಾರ, ಕುಡಿಯುವ ನೀರು ಇವೆಲ್ಲವೂ ಪ್ಲಾಸ್ಟಿಕ್ನಿಂದ ಕೂಡಿವೆ. ಆದ್ದರಿಂದಲೇ ಒಂದಲ್ಲ ಒಂದು ರೀತಿಯ ಅರೋಗ್ಯ ಸಮಸ್ಯೆಗಳು ಮನುಷ್ಯನನ್ನು ಭಾದಿಸುತ್ತಲೇ ಇರುತ್ತವೆ ಎಂದು ಪುತ್ತೂರು ಉಪವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಕೆ. ಇವರು ಮಾತನಾಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಣ್ಣಿನ ಸಂರಕ್ಷಣೆಯಾಗಬೇಕಾದರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಬೇಕು. ಆದರೆ ನಮ್ಮ ದಿನಚರಿ ಆರಂಭವಾಗುವುದೇ ಹಲ್ಲುಜ್ಜುವ ಪ್ಲಾಸ್ಟಿಕ್ ಬ್ರಷ್ನಿಂದ. ಸೌಂದರ್ಯ ವರ್ಧಕಗಳು, ಫೇಸ್ ಮಾಸ್ಕ್, ತಿನ್ನುವ ಆಹಾರ, ಕುಡಿಯುವ ನೀರು ಇವೆಲ್ಲವೂ ಪ್ಲಾಸ್ಟಿಕ್ನಿಂದ ಕೂಡಿವೆ. ಆದ್ದರಿಂದಲೇ ಒಂದಲ್ಲ ಒಂದು ರೀತಿಯ ಅರೋಗ್ಯ ಸಮಸ್ಯೆಗಳು ಮನುಷ್ಯನನ್ನು ಭಾದಿಸುತ್ತಲೇ ಇರುತ್ತವೆ ಎಂದು ಪುತ್ತೂರು ಉಪವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಕೆ. ಇವರು ಮಾತನಾಡಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಗುರುವಾರ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ನಿರ್ಮೂಲನೆಗೆ ಕ್ರಮ ಕೈಗೊಂಡು ಏಳು ವರ್ಷಗಳಾದರು ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಲಿಲ್ಲ. ನಾವು ಪ್ರತಿನಿತ್ಯ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿ ಬಯೋ ಡಿಗ್ರೆಡೆಬಲ್ ಉತ್ಪನ್ನಗಳನ್ನು ಬಳಸುವುದರಿಂದ ಸ್ವಲ್ಪ ಮಟ್ಟಿನ ಬದಲಾವಣೆಗಳನ್ನು ತರಲು ಸಾಧ್ಯ ಎಂದ ರಲ್ಲದೆ ಭೂಮಿಯ ಬಗೆಗೆ ಕಾಳಜಿಯನ್ನು ವಹಿಸಿ, ಅದನ್ನು ಸಂರಕ್ಷಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಬೇಕೆನ್ನುವ ತೀರ್ಮಾನವನ್ನು ವಿಶ್ವಸಂಸ್ಥೆಯು 1972 ರಲ್ಲಿ ಕೈಗೊಂಡಿತು. ಅದರನ್ವಯ ನಾವು ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ ಎಂದು ಇತಿಹಾಸದೆಡೆಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಪ್ಲಾಸ್ಟಿಕ್ ಎಂಬುದು ಪರಿಸರಕ್ಕೆ ಹಾನಿಕಾರಕ. ಅದು ಮಣ್ಣಲ್ಲಿ ಮಣ್ಣಾಗುವುದಿಲ್ಲ, ನೀರಲ್ಲಿ ಕರಗುವುದಿಲ್ಲ, ಬೆಂಕಿಯಲ್ಲಿ ಸುಡುವುದಿಲ್ಲ. ಹಾಗಾಗಿ ನಾವು ಪ್ಲಾಸ್ಟಿಕ್ ಕೈ ಚೀಲ ಬಳಸುವುದರ ಬದಲು ಬಟ್ಟೆಯ ಕೈಚೀಲವನ್ನು ಬಳಸಬೇಕು. ಪ್ರಕೃತಿಯನ್ನು ಉಳಿಸುವುದು, ಸಂರಕ್ಷಿಸುವುದು ನಮ್ಮ ಕರ್ತವ್ಯ. ಪ್ರಕೃತಿಯನ್ನು ನಾವು ಸಂರಕ್ಷಿಸದೇ ಇದ್ದಲ್ಲಿ ಪ್ರಕೃತಿಯಲ್ಲಿ ಖಂಡಿತವಾಗಿ ನಮ್ಮ ಅಸ್ತಿತ್ವ ಇರಲು ಸಾಧ್ಯವಿಲ್ಲ ಎಂದರು.
10ನೇ ತರಗತಿ ವಿದ್ಯಾರ್ಥಿನಿ ತನ್ವಿ ಯು. ಪರಿಸರ ಮಾಲಿನ್ಯದ ಕುರಿತು ಮಾತನಾಡಿದರೆ, ೮ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಹವಾಮಾನದ ಕುರಿತು, 7ನೇ ತರಗತಿ ವಿದ್ಯಾರ್ಥಿನಿ ಶಾಂಭವಿ ರಂಜನ್ ಪ್ರಕೃತಿಯ ವೈಶಿಷ್ಟ್ಯತೆಯ ಕುರಿತು ಮಾಹಿತಿಯನ್ನು ಹಂಚಿಕೊAಡರು. ವೇದಿಕೆಯಲ್ಲಿ ಶಾಲಾ ಪ್ರಂಶುಪಾಲೆ ಮಾಲತಿ ಡಿ. ಭಟ್ ಉಪಸ್ಥಿತರಿದ್ದರು.
9ನೇ ತರಗತಿಯ ವಿದ್ಯಾರ್ಥಿನಿ ದ್ವಿತಿ ಸ್ವಾಗತಿಸಿ, 9ನೇ ತರಗತಿಯ ವಿದ್ಯಾರ್ಥಿ ಯಶಸ್ ವಂದಿಸಿದರು. 8ನೇ ತರಗತಿಯ ವಿದ್ಯಾರ್ಥಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.

Pashupathi

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts