ಕರಾವಳಿ

ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ!

ದಾರಿ ಮಧ್ಯೆ ಹೃದಯಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. 

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ:  ದಾರಿ ಮಧ್ಯೆ ಹೃದಯಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಜೀವ ಉಳಿಸಲು ನೆರವಾದ ಮಂಗಳೂರಿನ ಆಸ್ಪತ್ರೆ సిబ్బంది 

akshaya college

ಬಂಟ್ವಾಳ : ದಾರಿ ಮಧ್ಯೆ ಹೃದಯಘಾತಕ್ಕೆ

ಒಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. 

ಬೆಳ್ತಂಗಡಿ ತಾಲೂಕಿನ ಅಳಕೆ ನಿವಾಸಿ ಮಿಥುನ್ ಹೃದಯಘಾತಕ್ಕೆ ತುತ್ತಾದವರು.ಬಂಟ್ವಾಳ ತಾಲೂಕಿನ ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದರು,

 ಹೃದಯಘಾತಕ್ಕೊಳಗಾಗಿದ್ದು.ಅವರ ಇಸಿಜಿ ರಿಪೋರ್ಟ್‌ ನ್ನು ಅವರ ಸಂಬಂಧಿಕರು ಪ್ರದೀಪ್ ನಾಯಕ್‌ ಕಳುಹಿಸಿದ್ದರು. ಈ ವರದಿಯನ್ನು ಪ್ರದೀಪ್ ನಾಯಕ್ ಅವರು ಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತ್ ಅವರಿಗೆ ಕಳುಹಿಸಿದ್ದರು. ವರದಿಯನ್ನು ನೋಡಿ ಕಾಮತ್ ಅವರು ತಕ್ಷಣವೇ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲು ಸೂಚಿಸಿದ್ದರು.

ಅದರಂತೆ ಉಪ್ಪಿನಂಗಡಿ ಬಳಿಯ ತಣ್ಣೀರುಪಂತ ಅಳಕೆಯಿಂದ ಮಿಥುನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಬರುತ್ತಿದ್ದರು. ಇದೇ ವೇಳೆ ಪ್ರದೀಪ್‌ ನಾಯಕ್ ಅವರು ತನ್ನ ಮನೆಯಿಂದ ಬಸ್ಸಿನಲ್ಲಿ ಹೊರಟಿದ್ದರು. ಮಿಥುನ್ ಅವರು ಪುಂಜಾಲಕಟ್ಟೆ ಕಳೆದು ಸಾಗುತ್ತಿರುವಾಗ ಅವರಿಗೆ ಎದೆನೋವು ತೀವ್ರವಾಯಿತು

ತಕ್ಷಣ ಈ ವಿಚಾರವನ್ನು ಮಿಥುನ್ ಮನೆಯವರು ಪ್ರದೀಪ್ ನಾಯಕ್ ಗೆ ತಿಳಿಸಿದರು. ಕೂಡಲೇ ವಗ್ಗ ಬಳಿ ಬಸ್ಸಿನಿಂದ  ಇಳಿದು ಮಿಥುನ್ ಅವರಿಗಾಗಿ ಕಾದಿದ್ದರು.ಅವರ ಬಳಿ ಹೃದಯಾಘಾತ ವಾದ ಕೂಡಲೇ ಅಗತ್ಯವಾಗಿ ನೀಡಬೇಕಾದ ಔಷಧಿಯನ್ನು ಇರಿಸಿಕೊಂಡಿದ್ದು, ರೋಗಿಗೆ ನೀಡಿದರು. ಇದರಿಂದ ಮಿಥುನ್ ಅವರಿಗೆ ಮತ್ತೆ ಹೃದಯಾಘಾತವಾಗುವುದು ತಪ್ಪಿತು.

ಬಳಿಕ ಅವರು ಅದೇ ಕಾರಿನಲ್ಲಿ ಮಂಗಳೂರಿಗೆ ಸಾಗುತ್ತಿರುವಾಗ ಟ್ರಾಫಿಕ್ ಜಾಮ್ ಇರುವ ಕಾರಣ ಕೆ.ಎಂ.ಸಿ.ಯ ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಬರಿಸಿ, ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದೀಗ ಮಿಥುನ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು. ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ

ಈ ಮಾಹಿತಿ ಬಹಿರಂಗವಾಗುತ್ತಲೇ ಪ್ರದೀಪ್ ನಾಯಕ್‌

ಅವರ ಕಾರ್ಯಕ್ಕೆ ಭಾರೀ ಪ್ರಶಂಸೆ ಗಳಿಸಿದರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜನಾರ್ದನ ಪೂಜಾರಿ ಅವರಿಂದ ಕೋಮು ವೈಷಮ್ಯ ಬಿತ್ತುವ ಕೆಲಸ: ಎಚ್. ಮಹಮ್ಮದ್ ಆಲಿ | ಚರ್ಚ್’ನಲ್ಲಿ ದಫನವಿಲ್ಲ: ಮೌರಿಸ್ ಮಸ್ಕರೇನಸ್

ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…