ಕರಾವಳಿ

“ಪ್ರಯಾಣಿಕರೇ ಗಮನಿಸಿ…” – ಪುತ್ತೂರಿನಿಂದ ಮಂಗಳೂರಿಗೆ ಬಸ್ ಇಲ್ಲ! ಉಳಿದ ಪ್ರದೇಶಗಳ ಬಸ್ ಸಂಚಾರದ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಹೇಳಿಕೆ ಹೀಗಿದೆ!

ಮಂಗಳೂರಿಗೆ ದಿನನಿತ್ಯ ತೆರಳುತ್ತಿದ್ದ ಪ್ರಯಾಣಿಕರು ಎಂದಿನಂತೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದರೆ, ಬಸ್ ಇಲ್ಲ...!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಂಗಳೂರಿಗೆ ದಿನನಿತ್ಯ ತೆರಳುತ್ತಿದ್ದ ಪ್ರಯಾಣಿಕರು ಎಂದಿನಂತೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದರೆ, ಬಸ್ ಇಲ್ಲ…!

akshaya college

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದಲ್ಲೇ ಸೇರಿದ್ದರು. ಮಂಗಳೂರಿಗೆ ತೆರಳುವ ಒಂದೇ ಒಂದು ಬಸ್ ಇಲ್ಲ ಎನ್ನುವುದನ್ನು ತಿಳಿದು, ಗೊಂದಲಕ್ಕೆ ಒಳಗಾದರು.

ಇದೇ ವೇಳೆ, ಕೆ.ಎಸ್.ಆರ್.ಟಿ.ಸಿ. ಅನೌನ್ಸ್’ಮೆಂಟ್ ಮಾಡಿದ್ದು – “ಪ್ರಯಾಣಿಕರೇ ಗಮನಿಸಿ, ಮಂಗಳೂರಿಗೆ ಯಾವುದೇ ಬಸ್ ಸಂಚರಿಸುತ್ತಿಲ್ಲ” ಎಂದು ಮೊಳಗಿತು.

ಮಡಿಕೇರಿಯಿಂದ ಬಸ್ ಆಗಮಿಸಿದ್ದು, ಕೆಲವರು ಬಸ್ ಹತ್ತಿದರು. ಜಿಲ್ಲೆಯಲ್ಲಿ ಸಂಚಾರ ಇಲ್ಲದೇ ಇರುವುದರಿಂದ ಬಸ್ ಎಲ್ಲಿವರೆಗೆ ಹೋಗುತ್ತದೆಯೋ, ಅಲ್ಲಿವರೆಗೆ ಮಾತ್ರ ಹೋಗುವುದಾಗಿ ಕಂಡಕ್ಟರ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ, “ಮಂಗಳೂರಿಗೆ ಬಸ್ ಬಿಡುತ್ತಿಲ್ಲ. ಉಳಿದ ಪ್ರದೇಶಗಳಿಗೆ ಬಸ್ ಬಿಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜನಾರ್ದನ ಪೂಜಾರಿ ಅವರಿಂದ ಕೋಮು ವೈಷಮ್ಯ ಬಿತ್ತುವ ಕೆಲಸ: ಎಚ್. ಮಹಮ್ಮದ್ ಆಲಿ | ಚರ್ಚ್’ನಲ್ಲಿ ದಫನವಿಲ್ಲ: ಮೌರಿಸ್ ಮಸ್ಕರೇನಸ್

ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…