ಪುತ್ತೂರು: ಹೃದಯಾಘಾತದಿಂದ ಹೂವಿನ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮೃತರನ್ನು ಕಲ್ಲಾರೆ ನಿವಾಸಿ, ಹೂವಿನ ವ್ಯಾಪಾರಿ ಲವ ಕುಮಾರ್ (45) ಎಂದು ಗುರುತಿಸಲಾಗಿದೆ.
ಮೃತರು ತಾಯಿ, ಪತ್ನಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಪರಿಚಿತರಾದವರು ಸಂತಾಪ ಸೂಚಿಸಿದ್ದಾರೆ.
























