tamanvi
ಅಪಘಾತ

ಮಂಗಗಳಿಂದ ದಾಳಿ ವ್ಯಕ್ತಿ ಸಾವು.!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಜಾನುವಾರುಗಳಿಗೆ ಮೇವು ಸಂಗ್ರಹಿಸುತ್ತಿದ್ದ 67 ವರ್ಷದ ವ್ಯಕ್ತಿಯ ಮೇಲೆ 20 ಕ್ಕೂ ಹೆಚ್ಚು ಮಂಗಗಳು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.

maithri

ಮಂಗಗಳು ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿದ್ದ ಜನರು ರಕ್ಷಣೆಗೆಂದು ಸೇರುವ ಹೊತ್ತಿಗೆ, ಲೋಹತ್‌ ಸಕ್ಕರೆ ಗಿರಣಿಯ ನಿವೃತ್ತ ಗುಮಾಸ್ತ ರಾಮನಾಥ್ ಚೌಧರಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಧುಬನಿ ಸದ‌ರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಸತ್ತಿದ್ದಾರೆಂದು ಘೋಷಿಸಿದರು.

ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಸ್ಥಳೀಯ ಮುಖ್ಯ ರಾಮಕುಮಾ‌ರ್ ಯಾದವ್ ಅವರ ಮಾಹಿತಿಯ ಮೇರೆಗೆ, ಪಾಂಡೌಲ್ ವೃತ್ತ ಅಧಿಕಾರಿ ಪುರುಷೋತ್ತಮ್ ಕುಮಾರ್ ಮತ್ತು ಪೊಲೀಸ್‌ ಠಾಣೆಯ ಉಸ್ತುವಾರಿ ಎಂಡಿ ನದೀಮ್ ಗ್ರಾಮಕ್ಕೆ ಭೇಟಿ ನೀಡಿ ಮಂಗಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರಿನಲ್ಲಿ ಸ್ಕೂಟರ್ ಢಿಕ್ಕಿ: ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕೊಯಿಲ ಸೀತಾರಾಮ ಗೌಡ ಮೃತ್ಯು!!

ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವರು ಬುಧವಾರ ಮಂಗಳೂರಿನ ಕೆಪಿಟಿ ಬಳಿ ಸಂಭವಿಸಿದ…