tamanvi
ಸಿನೇಮಾ

ಹಳ್ಳಿ ಹುಡುಗನ ‘ಒಲವಿನ ಪಯಣ’ | ಹೊಸಬರೇ ಹೆಣೆದಿರುವ ಹೊಸತನದ ಕಥೆ; ಇಲ್ಲಿ ಎಲ್ಲರೂ ಹೊಸಬರೇ

D_shiva_bhat
ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬನ ಬದುಕಿನ ಕಥೆಯೇ ಒಲವಿನ ಪಯಣ. ಗೊತ್ತು ಗುರಿಯಿಲ್ಲದ ಪ್ರೀತಿ ಪ್ರೇಮ ಆತನನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತದೆ ಎನ್ನುವುದೇ ‘ಒಲವಿನ ಪಯಣ’ದ ತಿರುಳು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬನ ಬದುಕಿನ ಕಥೆಯೇ ಒಲವಿನ ಪಯಣ. ಗೊತ್ತು ಗುರಿಯಿಲ್ಲದ ಪ್ರೀತಿ ಪ್ರೇಮ ಆತನನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತದೆ ಎನ್ನುವುದೇ ‘ಒಲವಿನ ಪಯಣ’ದ ತಿರುಳು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಲವಿನ ಪಯಣ ಕನ್ನಡ ಸಿನಿಮಾದ ನಿರ್ದೇಶಕ ಕಿಶನ್ ಬಲ್ನಾಡ್ ಅವರು, ಫೆಬ್ರವರಿ 21ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕಥೆಯೇ ನಾಯಕನಾಗಿರುವ ಈ ಚಿತ್ರ, ಕುಟುಂಬ ವರ್ಗ ಕುಳಿತು ನೋಡಬಹುದಾದಂತಹ ಸಿನಿಮಾವಾಗಿದೆ ಎಂದರು.

ನಾಗರಾಜ್ ಎಸ್. ಮುಳಗುಂದ ನಿರ್ಮಾಪಕರಾಗಿದ್ದು, ಮುಳಗುಂದ ಕ್ರಿಯೇಷನ್ಸ್’ನಡಿ ಸಿನಿಮಾ ಮೂಡಿಬಂದಿದೆ. ಮೂಲತಃ ಧರ್ಮಸ್ಥಳದವರಾದ ಸುನೀಲ್ ನಾಯಕ ನಟನಾಗಿ, ಕುಶಿ ಹಾಗೂ ಪ್ರಿಯಾ ಹೆಗ್ಡೆ ನಾಯಕಿಯರಾಗಿದ್ದಾರೆ. ಪದ್ಮಜಾ ರಾವ್, ಬಲ ರಾಜ್ವಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾಕರ್ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ಸಮೀಕ್ಷಾ, ಬೇಬಿ ರಿಧಿ ತಾರಾಗಣದಲ್ಲಿದ್ದಾರೆ ಎಂದರು.

ಜೀವನ್ ಗೌಡ ಛಾಯಗ್ರಾಹಕರಾಗಿ, ಕೀರ್ತಿರಾಜ್ ಸಂಕಲನದಲ್ಲಿ, ಗುರುಪ್ರಸಾದ್ ಕಲರಿಸ್ಟ್ ಆಗಿ, ಎಸ್.ಎಫ್.ಎಕ್ಸ್‍.ನಲ್ಲಿ ನವೀನ್ ಸಹಕರಿಸಿದ್ದಾರೆ. ಸಾಯಿ ಸರ್ವೇಶ್ ಅವರ ಸಂಗೀತದಲ್ಲಿ ಸಿನಿಮಾ ಮೂಡಿಬಂದಿದೆ ಎಂದು ವಿವರಿಸಿದರು.

ನಾಯಕ ನಟ ಸುನೀಲ್ ಮಾತನಾಡಿ, ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದು, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸುತ್ತಿದ್ದು, ಸಿನಿಮಾದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

ನಿರ್ಮಾಪಕ ನಾಗರಾಜ್ ಎಸ್. ಮುಳಗುಂದ, ನಟ ನಾಗೇಶ್ ಮಯ್ಯ, ನಟಿ ಕುಶಿ ಸಿನಿಮಾದ ಬಗ್ಗೆ ಮಾತನಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಟ ಅಮಿರ್ ಖಾನ್’ಗೆ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್ ತಂಡ!! ಲವ್ ಜಿಹಾದ್ ಪ್ರೋತ್ಸಾಹಕ್ಕೆ ತಕ್ಕ ಶಾಸ್ತಿ ಎಂಬ ಎಚ್ಚರಿಕೆ!

ಮುಂಬೈ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ನಂತರ ಇದೀಗ ಬಾಲಿವುಡ್ ನಟ ಆಮೀರ್ ಖಾನ್…

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…

ಮಲಯಾಳಂ – ತುಳುವಿನ ಸ್ಪರ್ಶವಿರುವ ಕೋಸ್ಟಲ್ ವುಡ್’ನ ‘ಮೀರಾ’ | ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ ಎಲ್ಲರೂ ಹೊಸಬರೇ!!

ತುಳು ರಂಗ ಭೂಮಿಯ ಅಪ್ಪ - ತುಳು ಸಿನಿಮಾ ರಂಗದ ಮಗಳು. ಇವರೆರಡರ ನಡುವಿನ ಬಾಂಧವ್ಯ, ರಂಗಭೂಮಿ…