ಶ್ರೀ ರಾಮ ನವಮಿಯ ಪ್ರಯುಕ್ತ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು ಪುತ್ತೂರು ಇದರ ವತಿಯಿಂದ ಕಾಸರಗೋಡು ಸಮೀಪದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಇರುವ ಶ್ರೀ ಮಹಾಬಲ ಶೆಟ್ಟಿ ಇವರ ಮನೆ ಶ್ರೀ ರಾಮ ಧಾಮದಲ್ಲಿ ಏ. 6ರಂದು ತಾಳಮದ್ದಳೆ ನಡೆಯಿತು.
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ. 13ರಂದು ನಡೆಯಲಿರುವ ಶ್ರೀ ಮಹಾವಿಷ್ಣು ಯಾಗ ಮತ್ತು ಧಾರ್ಮಿಕ ಸಭೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯರ ಪ್ರಾರ್ಥನೆಯೊಂದಿಗೆ ಆಡಳಿತ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಗೌಡರು ಬಿಡುಗಡೆಗೊಳಿಸಿದರು .
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಮಂಗಳವಾರ ಬೆಳಿಗ್ಗೆ ಗೊನೆ ಮುಹೂರ್ತ ನೆರವೇರಿಸಲಾಯಿತು.
ಬೀರಮಲೆ ಶ್ರೀ ವಿಶ್ವಕರ್ಮ ಸಮಾಜ ಸಭಾದ ನೇತೃತ್ವದಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಭಾನುವಾರ ಯುಗಾದಿ ಪ್ರಯುಕ್ತ ಶ್ರೀ ಮಹಾಗಣಪತಿ ಹವನ ಹಾಗೂ ಪಂಚಾಂಗ ಶ್ರವಣ ನಡೆಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ಏಪ್ರಿಲ್ 13ರಂದು ನಡೆಯಲಿದ್ದು, ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯಲ್ಲಿ ಶರ್ಮಾ ಬೆಂಬಲಿತ ಹಲವರು ಅವಿರೋಧ ಆಯ್ಕೆ ಆಗಿದ್ದು, ಘೋಷಣೆ ಒಂದೇ ಬಾಕಿ ಉಳಿದಿದೆ. ಈ ಮೂಲಕ ಪ್ರಚಾರದ ಮೊದಲ…
ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ಗಯಾಪದ ರಂಗ ಸಂಭ್ರಮ ಮತ್ತು ಕಲಾ ಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಮಾ. 25ರಂದು ರಾತ್ರಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶರ ದೇವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ದೇವಳದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.
ಶ್ರೀ ರಾಮ ಭಜನಾ ಮಂದಿರದ ಭಕ್ತಕೊಡಿಯ ಅಧ್ಯಕ್ಷ ಹಾಗೂ ಷಣ್ಮುಖ ಯುವಕ ಮಂಡಲ ಸದಸ್ಯ ರಾಜೇಶ್ ಎಸ್.ಡಿ (45) ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತ ಹೊಂದಿದ್ದಾರೆ.
ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಿತು.
39ನೇ ವರ್ಷದ ಉಪ್ಪಿನಂಗಡಿ ವಿಜಯ - ವಿಕ್ರಮ ಜೋಡುಕರೆ ಕಂಬಳ ಕೂಟದ ಕನೆ ಹಲಗೆಯಲ್ಲಿ 07 ಜೊತೆ, ಅಡ್ಡಹಲಗೆಯಲ್ಲಿ 04 ಜೊತೆ, ಹಗ್ಗ ಹಿರಿಯದಲ್ಲಿ 10 ಜೊತೆ, ನೇಗಿಲು ಹಿರಿಯದಲ್ಲಿ 23 ಜೊತೆ, ಹಗ್ಗ ಕಿರಿಯದಲ್ಲಿ 15 ಜೊತೆ, ನೇಗಿಲು ಕಿರಿಯದಲ್ಲಿ 72 ಜೊತೆ ಭಾಗವಹಿಸಿದ್ದು, ಒಟ್ಟು 131 ಜೊತೆ ಕೋಣಗಳು ಪಾಲ್ಗೊಂಡವು.
Welcome, Login to your account.
Welcome, Create your new account
A password will be e-mailed to you.