ಲೀಗಲ್ ಲೈಮ್ ಲೈಟಿನ ಸಲಹಾಗಾರರಾಗಿ ಆಯ್ಕೆಯಾದ ಗೌರವಾರ್ಥ ವಕೀಲರೂ, ಕ್ಸಿತಿ ಕಲೆಕ್ಷನ್ಸ್ ಮಾಲಕರೂ ಆದ ಅನ್ನಪೂರ್ಣ ಶರ್ಮಾ ಅವರಿಗೆ ಬೆಂಗಳೂರಿನಲ್ಲಿ ನಡೆದ ವಕೀಲರ ದಿನಾಚರಣೆ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪ್ರೋ ಲೀಗಲ್ ಟ್ರಸ್ಟ್ ನೇತೃತ್ವದಲ್ಲಿ ಲೀಗಲ್ ಲೈಮ್ ಲೈಟ್, ಪಿ.ಆರ್.ಸಿ.ಐ. ಬೆಂಗಳೂರು ಚಾರ್ಟರ್ ಆಶ್ರಯದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್’ನಲ್ಲಿರುವ ಕರ್ನಾಟಕ ಸ್ಟೇಟ್ ಗವರ್ನಮೆಂಟ್ ಎಂಪ್ಲಾಯೀಸ್ ಅಸೋಸಿಯೇಶನ್’ನಲ್ಲಿ ಸಮಾರಂಭ ನಡೆಯಿತು.
ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯಮೂರ್ತಿ ವಿ. ಗೋಪಾಲ ಗೌಡ, ಹೈಕೋರ್ಟ್ ಸೀನಿಯರ್ ಅಡ್ವೊಕೇಟ್ ಬಿ.ವಿ. ಆಚಾರ್ಯ, ಪಿ.ಆರ್.ಸಿ.ಐ. ಸ್ಥಾಪಕ ಎಂ.ಬಿ. ಜಯರಾಮ್, ಪಿ.ಆರ್.ಸಿ.ಐ. ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್, ಹೈಕೋರ್ಟ್ ಸೀನಿಯರ್ ಅಡ್ವೊಕೇಟ್ ಡಿ.ಆರ್. ರವಿಶಂಕರ್, ಲೀಗಲ್ ಲೈಮ್ ಲೈಟ್’ನ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.



























