ಟ್ರೆಂಡಿಂಗ್ ನ್ಯೂಸ್

ಬೆಳ್ಳಿ ನಾಣ್ಯದಿಂದ ಹುಟ್ಟಿಕೊಂಡ `ರೂಪಾಯಿ’ ಹೆಸರು! ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಮುಂಬೈ ಎಕ್ಸಿಬಿಷನ್!!

GL

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈನಲ್ಲಿ ಏರ್ಪಡಿಸಿದ್ದ ಒಂದು ಎಕ್ಸಿಬಿಷನ್’ನಲ್ಲಿ ರೂಪಾಯಿ ಹಿಂದಿನ ಇತಿಹಾಸಕ್ಕೆ ಬೆಳಕು ಚೆಲ್ಲಲಾಗಿದೆ. ರೂಪಾಯಿ ಹೆಸರು ಹೇಗೆ ಹುಟ್ಟಿಕೊಂಡಿತು ಎಂಬ ಹಲವರ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿದೆ.

chennai-shopping
maithri

ರೂಪಾಯಿಗೆ 2500 ವರ್ಷಗಳ ಕಥೆ ಇದೆ ಎಂಬ ಸತ್ಯವೂ ಹೊರಬಿದ್ದಿದೆ. 1538ರಲ್ಲಿ ಮೊಘಲ್ ದೊರೆ ಹುಮಾಯೂನ್’ನನ್ನು ಸೋಲಿಸಿ ಅಧಿಕಾರ ಹಿಡಿದಿತಾನೇ ಶೇರ್ ಶಾ ಸೂರಿ. ದೇಶದಲ್ಲಿ ಆಗ ದುಡ್ಡಿನ ಚಲಾವಣೆ ಇತ್ತಾದರೂ, ವ್ಯವಸ್ಥಿತವಾಗಿ ಇರಲಿಲ್ಲ. ಆದ್ದರಿಂದ ಆಗ ಇದ್ದ ಕೆಲ ಗೊಂದಲಗಳಿಗೆ ತೆರೆ ಎಳೆಯಲು ಶೇರ್ ಶಾ ಬೆಳ್ಳಿ ನಾಣ್ಯವನ್ನು ಪರಿಚಯಿಸಿದ. ಸಂಸ್ಕೃತದಲ್ಲಿ ಬೆಳ್ಳಿ ನಾಣ್ಯಕ್ಕೆ ರೂಪ್ಯ ಅನ್ತಾರೆ. ಇದೇ ಮುಂದೆ ರೂಪಾಯಿ ಆಯಿತು.

ಶೇರ್ ಶಾನ ನಂತರ ಬಂದ ಮೊಘಲರು ಇದೇ ರೂಪಾಯಿನ ಮುಂದುವರಿಸಿದರು. ಆದ್ರೆ ಅವರವರಿಗೆ ಬೇಕಾದ ಹಾಗೆ ವಿನ್ಯಾಸ ಮಾಡ್ಕೊಂಡ್ರು. ಪ್ರತಿಯೊಬ್ಬ ರಾಜನೂ ತನ್ನದೇ ಆದ ‘ಸಿಂಬಲ್’ ಹಾಕಿಸ್ಕೊಂಡ. ಉದಾಹರಣೆಗೆ ಸಿಖ್ ರಾಜರು ಅರಳಿ ಮರದ ಎಲೆ ಚಿತ್ರ ಹಾಕಿಸಿದ್ರೆ, ಅವಧ್ ನವಾಬರು ಮೀನಿನ ಚಿತ್ರ ಕೆತ್ತಿಸಿದ್ರು. ಬ್ರಿಟಿಷರು ಬಂದ್ಮೇಲೆ ಕೈಯಲ್ಲಿ ಮಾಡ್ತಿದ್ದ ಕಾಸುಗಳು ಹೋಗಿ ಮಷಿನ್ನಲ್ಲಿ ಮಾಡೋ ‘ಪರ್ಫೆಕ್ಟ್’ ನಾಣ್ಯಗಳು ಬರೋಕೆ ಶುರುವಾಯ್ತು.

ಎಕ್ಸಿಬಿಷನ್’ನಲ್ಲಿ ಕ್ರೇಜಿ ಕಲೆಕ್ಷನ್!

ಮುಂಬೈನಲ್ಲಿ ನಡೆಯುತ್ತಿರೋ ಎಕ್ಸಿಬಿಷನ್’ನಲ್ಲಿ ಪಾಲ್ ಅಬ್ರಹಾಂ ಅನ್ನುವವರ ಸಂಗ್ರಹದಲ್ಲಿ ಈ ಮಾಹಿತಿ ಹೊರಬಿದ್ದಿದೆಯಂತೆ. ಇಂಡಸ್ ಇಂಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಇವರು, ಸಣ್ಣ ವಯಸ್ಸಲ್ಲೇ ನಾಣ್ಯ ಸಂಗ್ರಹದ ಗೀಳಿಗೆ ಬಿದ್ದುಬಿಟ್ಟರು. ಇಂದು ಅಪರೂಪದ ನಾಣ್ಯಗಳ ಭಂಡಾರವೇ ಅವರ ಬಳಿಯಿದೆಯಂತೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…

ಸಿಬಿಜಿ ಘಟಕ ಅಧ್ಯಯನಕ್ಕೆ ರಾಜ್ಯದಿಂದ ತಂಡ | ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಬಗ್ಗೆ ಬಿಬಿಎಂಪಿಯಲ್ಲೂ ಚರ್ಚೆ ನಡೆದಿದೆ.…