ಪುತ್ತೂರು: ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜಿ. ಸೂರ್ಯನಾರಾಯಣ ವರ್ಮಾ ಅವರು ಬುಧವಾರ ಬೆಳಿಗ್ಗೆ ಪುತ್ತೂರಿಗೆ ಭೇಟಿ ನೀಡಿದರು.
ಆಂಧ್ರಪ್ರದೇಶದ ಗುಡಿವಾಡದವರಾದ ಇವರು, ಪುತ್ತೂರು ಜೇಕಾಂ ಟೇಬಲ್ 1ಗೆ ಭೇಟಿ ನೀಡಿ ಬ್ಯುಸಿನೆಸ್ ಮೀಟಿಂಗಿನಲ್ಲಿ ಭಾಗಿಯಾಗಲು ಆಗಮಿಸಿದರು.
ಜೇಸಿಐ ವಲಯ ಅಧ್ಯಕ್ಷ ಅಭಿಲಾಷ್ ಬಿ.ಎ. ಜೊತೆಗಿದ್ದರು.
ಜೇಕಾಂ ಪುತ್ತೂರು ಟೇಬಲ್ 1 ಇದರ ಅಧ್ಯಕ್ಷ ಪಶುಪತಿ ಶರ್ಮಾ ಹಾಗೂ ಕಾರ್ಯದರ್ಶಿ ಸುಹಾಸ್ ಅವರು ದರ್ಬೆಯಲ್ಲಿ ಸ್ವಾಗತಿಸಿದರು.






















