ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯ ಶಾಲಾ ಸಂಭ್ರಮ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಂದಿ ನೀರಿಗೆ ಬಿದ್ದವರನ್ನು ಮೇಲಕ್ಕೆ ಎತ್ತಿ ರಕ್ಷಿಸಿದ, ಒಂದು ಸಾವಿರಕ್ಕೂ ಅಧಿಕ ಮೃತ ದೇಹಗಳನ್ನು ನೀರಿನಾಳದಿಂದ ಮೇಲಕ್ಕೆ ತಂದ ಆಪತ್ ಬಾಂಧವ, ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಈಶ್ವರ್ ಮಲ್ಪೆಯವರು ಮಕ್ಕಳಿಗೆ ಮೊಬೈಲ್ ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು. ತಮ್ಮ ತಮ್ಮ ಆತ್ಮ ರಕ್ಷಣೆಗೆ ಪ್ರತಿಯೊಬ್ಬರು ಈಜು ಕಲಿಯಬೇಕು ಎಂದು ಕರೆ ನೀಡಿದರು. ತನ್ನ ಸಾಧನೆಯ ಹಿಂದೆ ಕರ್ನಾಟಕದ ಪ್ರತಿಯೊಬ್ಬರ ಆಶೀರ್ವಾದ ಇದೆ. ನನ್ನಂತೆ ಪ್ರತಿಯೊಬ್ಬರೂ ಒಂದಿಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಂಡಿರುವವರೆ. ವಿದ್ಯಾರ್ಥಿ ಜೀವನದಲ್ಲೇ ಪರೋಪಕಾರಿ ಬುದ್ದಿ ಬೆಳೆಸಿ ಕೊಳ್ಳಿ. ಶಾಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.