tamanvi
ಕರಾವಳಿಸ್ಥಳೀಯ

ಅಭಿಮಾನ ಕಿತ್ತೆಸೆದ ದರ್ಶನ್ ಅಭಿಮಾನಿ!! ಮನುಷ್ಯತ್ವ ಮರೆತ ನಟನ ಫೊಟೋ ತೆಗೆದ ಮಂಗಳೂರಿನ ರಿಕ್ಷಾ ಚಾಲಕ!!

ತನ್ನ ಆಟೋ ರಿಕ್ಷಾದಲ್ಲಿ ನಟ ದರ್ಶನ್ ಫೊಟೋ ಹಾಕಿ ಅಭಿಮಾನ ಪ್ರದರ್ಶಿಸಿದ್ದ ಮಂಗಳೂರಿನ ಆಟೋ ಚಾಕರೊಬ್ಬರು, ಆ ಫೊಟೋವನ್ನು ಕಿತ್ತೆಸೆದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ತನ್ನ ಆಟೋ ರಿಕ್ಷಾದಲ್ಲಿ ನಟ ದರ್ಶನ್ ಫೊಟೋ ಹಾಕಿ ಅಭಿಮಾನ ಪ್ರದರ್ಶಿಸಿದ್ದ ಮಂಗಳೂರಿನ ಆಟೋ ಚಾಕರೊಬ್ಬರು, ಆ ಫೊಟೋವನ್ನು ಕಿತ್ತೆಸೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರ ಮೇಲಿನ ಆರೋಪ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದಂತೆ ಅಭಿಮಾನಿಗಳೇ ಗಲಿಬಿಲಿಗೊಳ್ಳುವಂತಾಗಿದೆ. ಇನ್ನೊಂದೆಡೆ ಹಲವಾರು ಮಂದಿ ತಮ್ಮ ಆಕ್ರೋಶವನ್ನು ಹೊರಗೆಡವುತ್ತಿದ್ದಾರೆ.

ಇದರ ನಡುವೆ ಮಂಗಳೂರಿನ ಆಟೋ ಚಾಲಕರೊಬ್ಬರು ತನ್ನ ಆಟೋದಲ್ಲಿದ್ದ ದರ್ಶನ್ ಫೊಟೋವನ್ನು ತೆಗೆದು ಹಾಕಿದ್ದಾರೆ.

ಮಾತ್ರವಲ್ಲ, ದರ್ಶನ್ ಮೇಲೆ ಅಪಾರ ವಿಶ್ವಾಸ ಇತ್ತು. ಆದರೆ ವ್ಯಕ್ತಿಯೋರ್ವರನ್ನು ಕೊಲೆ ಮಾಡುವ ಮಟ್ಟಕ್ಕೆ ಇಳಿದು ಮನುಷ್ಯತ್ವ ಮರೆತಿದ್ದಾರೆ ಎಂದು ತುಳುವಿನಲ್ಲಿ ಹೇಳುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 185