Gl
ರಾಜ್ಯ ವಾರ್ತೆ

ಬೆಂಗಳೂರು ಕಂಬಳದ ಬಳಿಕ ಇನ್ನು ಮೈಸೂರು ಕಂಬಳ? ಶಾಸಕ ಅಶೋಕ್ ರೈಗೆ ಕರೆ ಮಾಡಿದ ಟ್ರಬಲ್ ಶೂಟರ್!

ರೈಗಳೆ… ನೀವು ದಸರಾಗೆ ಮೈಸೂರಲ್ಲಿ‌ಕಂಬಳ ಮಾಡ್ತೀರಾ? ಬೆಂಗಳೂರಲ್ಲಿ‌ಮಾಡಿದ ಹಾಗೆ ನಮ್ಮ ಮೈಸೂರಲ್ಲೂ ಮಾಡ್ತೀರಾ?

ಈ ಸುದ್ದಿಯನ್ನು ಶೇರ್ ಮಾಡಿ


ಪುತ್ತೂರು: ರೈಗಳೆ… ನೀವು ದಸರಾಗೆ ಮೈಸೂರಲ್ಲಿ‌ಕಂಬಳ ಮಾಡ್ತೀರಾ? ಬೆಂಗಳೂರಲ್ಲಿ‌ಮಾಡಿದ ಹಾಗೆ ನಮ್ಮ ಮೈಸೂರಲ್ಲೂ ಮಾಡ್ತೀರಾ? ನಮ್ಮ‌ಪೂರ್ಣ ಸಹಕಾರ ಇದೆ ..ಹೆಂಗೆ? ಇದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮೊಬೈಲ್ ಕರೆ ಮಾಡಿ ವಿನಂತಿಸಿದ ಪರಿ.

Pashupathi

ಮುಂದಿನ‌ ದಸರಾ ವೇಳೆಗೆ ಮೈಸೂರಲ್ಲಿ ಕಂಬಳ ಮಾಡಿದ್ರೆ ಚೆನ್ನಾಗಿರುತ್ತದೆ. ನೀವು ಸೇರಿಕೊಂಡ್ರೆ ಕಂಬಳಕ್ಕೆ ಮೆರುಗು ಬರ್ತದೆ, ಹೇಗೆ ಮಾಡಬಹುದ? ಎಂದು ಡಿಕೆಶಿ ಕೇಳಿದ್ದಾರೆ.

akshaya college

ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ಪ್ರಯತ್ನ ಮಾಡೋಣ. ಬೇರೆ ಬೇರೆ ಕಡೆಗಳಿಂದಲೂ ನಮ್ಮಲ್ಲಿ‌ ಕಂಬಳ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ನಗುತ್ತಲೇ ಉತ್ತರಿಸಿದ ಶಾಸಕರು ಕಂಬಳ ಮಾಡುವುದಿಲ್ಲ ಎಂದು ಹೇಳದೆ ಉಪ ಮುಖ್ಯಮಂತ್ರಿಯವರಲ್ಲಿ ನೋಡುವ ಎಂಬ ಉತ್ತರವನ್ನು ನೀಡಿದ್ದಾರೆ.

ಡಿಕೆಶಿ ಅಥವಾ ಸರಕಾರ ಒತ್ತಾಯ ಮಾಡಿದ್ದಲ್ಲಿ‌ ಮುಂದಿನ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರಲ್ಲೂ ಕಂಬಳ ಕೋಣಗಳು ಸದ್ದು ಮಾಡಬಹುದು.‌ ಕರಾವಳಿಯ ಕಂಬಳಕ್ಕೆ ಇನ್ನು ಎಲ್ಲಿಲ್ಲದ ಬೇಡಿಕೆ ಬರುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಒಲ್ಲದ ಮದುವೆ, ನಿಲ್ಲದ ಪ್ರೇಮ | ತಾಳಿ ಕಟ್ಟೋ ವೇಳೆ ಮುರಿದ ಮದುವೆ, ಸಂಜೆಗೆ ಪ್ರೇಮಿ ಜೊತೆ ನೆರವೇರಿತು

ಹಾಸನ: ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ತಾಳಿ ಕಟ್ಟುವ ವೇಳೆ…