ರಾಜಸ್ಥಾನ: ಉದ್ಯಮಿ ವೆಂಕಟದತ್ತ ಸಾಯಿ ಅವರೊಂದಿಗೆ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು,(PV SINDHU) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉದಯಪುರದಲ್ಲಿ (Udayapura)ನಿನ್ನೆ ಸಂಜೆ ವೆಂಕಟದತ್ತ ಸಾಯಿ ಅವರೊಂದಿಗೆ ಬ್ಯಾಡ್ಮಿಂಟನ್(Badminton) ಚಾಂಪಿಯನ್ ಪಿ.ವಿ. ಸಿಂಧು ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಯಿತು. ದಂಪತಿಯ ಹೊಸ ಜೀವನಕ್ಕೆ ಶುಭಾಶಯ ಹಾಗೂ ಆಶೀರ್ವಾದ ತಿಳಿಸಿದ್ದೇನೆ’ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ (Gajendra Singh Shekhavath) ಶೇಖಾವತ್ ತಿಳಿಸಿದ್ದಾರೆ.
ಉದಯಪುರದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಿ.ವಿ. ಸಿಂಧು – ವೆಂಕಟ್ ದತ್ತ (Venkata Datta )ಅವರ ಆತ್ಮೀಯರು, ಕೆಲ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದಾರೆ.
ಡಿ.20 ರಂದು ಸಂಗೀತ್, ಡಿ.21 ರಂದು ಹಳದಿ, ಮೆಹೆಂದಿ ಕಾರ್ಯಕ್ರಮ ನಡೆದಿದೆ. ಹೈದರಾಬಾದ್ನಲ್ಲಿ ನಾಳೆ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಆಹ್ವಾನಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು. ಡಿಸಿಎಂ ಪವನ್ ಕಲ್ಯಾಣ್, ತೆಲಂಗಾಣ ಸಿಎಂ ರೇವಂತ್ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.
ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರ ಪತಿ ವೆಂಕಟ್ ದತ್ತ ಸಾಯಿ ಪೊಸಿಡೆಕ್ಸ್ ಟೆಕ್ನಾಲಜೀಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ವೆಂಕಟ್ ಬ್ಯಾಡ್ಮಿಂಟನ್ ಆಡದಿದ್ದರೂ ಕ್ರೀಡೆಯನ್ನು ಬೆಂಬಲಿಸುತ್ತಾರೆ. ಹೀಗಾಗಿ ನನಗೆ ಬ್ಯಾಡ್ಮಿಂಟನ್ನಲ್ಲಿ ಮುಂದುವರಿಲು ಸದಾ ಪ್ರೋತ್ಸಾಹಿಸುತ್ತಾರೆ. ಅವರು ತಮ್ಮ ಕಂಪನಿಯನ್ನು ನಿರ್ವಹಿಸುವಲ್ಲಿ ನಿರತರಾಗಿದ್ದರೂ, ಮೋಟಾರ್ ಸ್ಪೋರ್ಟ್ಸ್ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅವರ ಬಳಿಕ ಸೂಪರ್ ಬೈಕ್ಗಳು ಹಾಗೂ ಸ್ಪೋರ್ಟ್ಸ್ ಕಾರುಗಳ ಸಂಗ್ರಹವಿದೆ. ಮದುವೆ ಆದರೆ ವೃತ್ತಿ ಜೀವನ ಅಂತ್ಯ ಎಂದಲ್ಲ. ನಂತರವೂ ಫಿಟ್ ಆಗಿರುವುದು ಹಾಗೂ ಆಟದಲ್ಲಿ ಮುಂದುವರಿಯುವುದು ನನ್ನ ಗುರಿ’ ಎಂದು ಪಿ.ವಿ. ಸಿಂಧು ನಿಶ್ಚಿತಾರ್ಥದ ಸಂದರ್ಭ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಪಿ.ವಿ.ಸಿಂಧು ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ತಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ 2019ರಲ್ಲಿ ಚಿನ್ನ ಸೇರಿ ಒಟ್ಟು 5 ಬಾರಿ ಪದಕ ವಿಜೇತರಾಗಿದ್ದಾರೆ. ಒಲಿಂಪಿಕ್ಸ್ನಲ್ಲಿ ಒಂದು ಬಾರಿ ಬೆಳ್ಳಿ ಮತ್ತು ಮತ್ತೊಂದು ಬಾರಿ ಕಂಚಿನ ಪದಕ ಗೆದ್ದಿದ್ದಾರೆ. ವಿಶ್ವ ಶಟಲ್ ಬ್ಯಾಡ್ಮಿಂಟನ್ ಬ್ಯಾಂಕಿಂಗ್ನಲ್ಲಿ ಸಿಂಧು 2017ರಲ್ಲಿ ತಮ್ಮ ಜೀವನಶ್ರೇಷ್ಠ 2ನೇ ಶ್ರೇಯಾಂಕದವರೆಗೆ ಏರಿದ್ದರು.