Gl
ಶಿಕ್ಷಣ

ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ | ಅಧಿಕಾರಿ, ಜನಪ್ರತಿನಿಧಿಗಳಿಗಾಗಿ ಕಾದು ಕುಳಿತ ವಿದ್ಯಾರ್ಥಿಗಳು: 9.30ಕ್ಕೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ ಶುರುವಾದದ್ದು 11 ಗಂಟೆಗೆ!!

ಪುತ್ತೂರು: ಜೂನ್ 1 ಭಾನುವಾರ. ಹಾಗೂ ಶೈಕ್ಷಣಿಕ ವರ್ಷಾರಂಭ ಜೂನ್ 2ರ ಸೋಮವಾರ. ಹಾಗಾಗಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಮೊಟ್ಟೆತ್ತಡ್ಕ ಶಾಲೆಯಲ್ಲಿ ಆರಂಭಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜೂನ್ 1 ಭಾನುವಾರ. ಹಾಗೂ ಶೈಕ್ಷಣಿಕ ವರ್ಷಾರಂಭ ಜೂನ್ 2ರ ಸೋಮವಾರ. ಹಾಗಾಗಿ ಪುತ್ತೂರು ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವವನ್ನು ಮೊಟ್ಟೆತ್ತಡ್ಕ ಶಾಲೆಯಲ್ಲಿ ಆರಂಭಿಸಲಾಯಿತು.

Pashupathi

ಶಿಸ್ತು, ಸಂಯಮ, ವಿದ್ಯೆಯನ್ನು ಹೇಳಿಕೊಡುವ ಈ ದೇಗುಲದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳು ಆಗಮಿಸಿದ್ದರು. ಇದರಲ್ಲಿ ಒಂದೇ ತರಗತಿಗೆ ಹೊಸ ದಾಖಲಾತಿ ಪಡೆದ ಪುಟಾಣಿ ವಿದ್ಯಾರ್ಥಿಗಳೂ ಇದ್ದರು. ದೊಡ್ಡ ಬ್ಯಾಂಡನ್ನು ಹೆಗಲಿಗೇರಿಸಿಕೊಂಡು, ವಾದ್ಯವನ್ನು ಊದಲು ಕಾದುಕೊಂಡು ಶಾಲಾ ಗೇಟ್ ಬಳಿ ಅಚ್ಚುಕಟ್ಟಾಗಿ ಸರತಿಯಲ್ಲಿ ವಿದ್ಯಾರ್ಥಿಗಳು ನಿಂತದ್ದೇ ಬಂತು.

akshaya college

ಕಾರ್ಯಕ್ರಮ ಶುರು ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಲೇ ಇಲ್ಲ. ಸುಮಾರು 9.45ರ ಹೊತ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸಿದರು. ಹಾಗಾಗಿ ಬಳಿಕ ಸ್ವಾಗತೋತ್ಸವದ ಸಿದ್ಧತೆ ಮೆಲ್ಲಗೆ ಆರಂಭವಾಗತೊಡಗಿತು. ಆದರೆ ಸಭಾ ಕಾರ್ಯಕ್ರಮ ಶುರು ಮಾಡಲು ಜನಪ್ರತಿನಿಧಿಗಳು ಬರಬೇಕಲ್ಲವೇ!
ಸುಮಾರು 10.45ರ ಹೊತ್ತಿಗೆ ಜನಪ್ರತಿನಿಧಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು. ಅಷ್ಟರಲ್ಲಿ ವಿದ್ಯಾರ್ಥಿಗಳು ಆಕಳಿಕೆ ತೆಗೆಯುತ್ತಿದ್ದರು. ಸಂಯಮ ಕಳೆದುಕೊಂಡ ವಿದ್ಯಾರ್ಥಿಗಳನ್ನು ಸಂಭಾಳಿಸಲು ಶಿಕ್ಷಕರು ಒದ್ದಾಡುತ್ತಿದ್ದರು. ಸುಮಾರು 11 ಗಂಟೆ ಹೊತ್ತಿಗೆ ಸಭಾ ಕಾರ್ಯಕ್ರಮ ಆರಂಭವಾಗೇ ಬಿಟ್ಟಿತು.

ಬಡತನ ವಿದ್ಯೆಗೆ ಅಡ್ಡಿಯಲ್ಲ: ಶಾಸಕ ಅಶೋಕ್ ರೈ

ಸಮವಸ್ತ್ರ ವಿತರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮಾತ್ರ ಸಿಗುವುದೆಂಬ ಭಾವನೆಯಿಂದ ಪೋಷಕರು ಹೊರಬರಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಕ್ಕಳ ಭವಿಷ್ಯದ ತಳಪಾಯ ಭದ್ರವಾಗಲಿದೆ. ಬಡತನ ವಿದ್ಯೆಗೆ ಅಡ್ಡಿಯಾಗುವುದಿಲ್ಲ. ಪಠ್ಯಪುಸ್ತಕ, ಸಮವಸ್ತ್ರಗಳಿಗೂ ಕೊರತೆಯಿಲ್ಲ. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರು ಮನೆಗಿಂತ ಹೆಚ್ಚು ಶಾಲೆ ಪ್ರೀತಿಸುತ್ತಾರೆ. ಪೋಷಕರು ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ಪೋಷಕರ ನಡತೆಯು ಸರಿಯಾಗಿರಬೇಕು ಎಂದರು.

ದೇಶದ ಉತ್ತಮ ಪ್ರಜೆಗಳಾಗಿ: ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ

ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದು, ಅವುಗಳನ್ನು ಪಡೆದುಕೊಂಡು ಉನ್ನತ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಎಂದರು.

ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮೋಹನ್ ಅಮ್ಮುಂಜೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಅರ್., ಕ್ಷೇತ್ರ ಸಮನ್ವಯಧಿಕಾರಿ ನವೀನ್ ಸ್ಟಿಫನ್ ವೇಗಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಕೆಮ್ಮಿಂಜೆ ಪಿ. ಎಂ. ಶ್ರೀ ಶಾಲಾ ಮುಖ್ಯಶಿಕ್ಷಕ ಸಂತೋಷ್ ಉಪಸ್ಥಿತರಿದ್ದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಲ ಸ್ವಾಗತಿಸಿದರು. ಶಿಕ್ಷಕಿ ಅರ್ಚನಾ ವಂದಿಸಿದರು. ಶಿಕ್ಷಕಿ ಸುಮತಿ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಅಕ್ಷಯ ಕಾಲೇಜು: ಎನ್.ಎಸ್.ಎಸ್ ಸ್ವಯಂ ಸೇವಕಿ ವರ್ಷಿಣಿ.ಎಸ್  ಗೆ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪ್ರಶಸ್ತಿ

ಮೈಸೂರು ವಿಶ್ವವಿದ್ಯಾನಿಲಯ,ರಾಷ್ಟೀಯ ಸೇವಾ ಯೋಜನೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ…