ಕರಾವಳಿ

ಡಿ. 15ರಂದು ರಾಮ್ಕೋ ಸಿಮೆಂಟ್ ಅರ್ಪಿಸುವ ಇಂಜಿನೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್ 2|ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಐ) ಪುತ್ತೂರು ಸೆಂಟರ್ ಆಯೋಜಿಸಿರುವ ಪಂದ್ಯ

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಐ) ಪುತ್ತೂರು ಸೆಂಟರ್ ವತಿಯಿಂದ  ರಾಮ್ಕೋ ಸಿಮೆಂಟ್ ಅರ್ಪಿಸುವ ಇಂಜಿನೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯ  ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಡಿ. 15ರಂದು ಬೆಳಿಗ್ಗೆ 9ರಿಂದ ನಡೆಯಲಿದೆ ಎಂದು ಸಂಯೋಜಕ ಸಮಿತಿ ಛೇರ್ ಮೆನ್ ನರಸಿಂಹ ಪೈ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಐ) ಪುತ್ತೂರು ಸೆಂಟರ್ ವತಿಯಿಂದ  ರಾಮ್ಕೋ ಸಿಮೆಂಟ್ ಅರ್ಪಿಸುವ ಇಂಜಿನೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯ  ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಡಿ. 15ರಂದು ಬೆಳಿಗ್ಗೆ 9ರಿಂದ ನಡೆಯಲಿದೆ ಎಂದು ಸಂಯೋಜಕ ಸಮಿತಿ ಛೇರ್ ಮೆನ್ ನರಸಿಂಹ ಪೈ ಹೇಳಿದರು.

akshaya college

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಪಿ ಯತೀಶ್ ಎನ್. ಮುಖ್ಯ ಅತಿಥಿಯಾಗಿರುವರು. ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಸಯೋಜಕ ಸಮಿತಿ ಛೇರ್ ಮೆನ್ ನರಸಿಂಹ ಪೈ, ಜಿಲ್ಲಾ ಯುವಜನ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ಅತಿಥಿಯಾಗಿರುವರು. ಇದೇ ಸಂದರ್ಭ ಯುವ ಕ್ರಿಕೆಟ್ ಸಾಧಕರಾದ ಅನಘಾ ಹಾಗೂ ಏಂಜಲೀಕಾ ಪಿಂಟೋ ಅವರನ್ನು ಸನ್ಮಾನಿಸಲಾಗುವುದು ಎಂದರು.

ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 30,000/ ರೂ. ನಗದು, ದ್ವಿತೀಯ ಬಹುಮಾನವಾಗಿ 20,000/ ರೂ. ಹಾಗೂ ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಟ್ರೋಫಿ ನೀಡಲಾಗುವುದು. ಒಟ್ಟು ಎಂಟು ತಂಡಗಳು ಪಂದ್ಯದಲ್ಲಿ ಭಾಗವಹಿಸುತ್ತಿದ್ದು, ಇಂಜಿನಿಯರ್ ಅಸೋಸಿಯೇಷನ್”ನ ಪುತ್ತೂರಿನ ಎರಡು ತಂಡ, ಉಳಿದಂತೆ ಬೆಳ್ತಂಗಡಿ, ಮಂಗಳೂರು, ಕಾರ್ಕಳ, ಮೂಲ್ಕಿ, ಸುಳ್ಯ, ಉಡುಪಿಯ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪದಲ್ಲಿ ಎಸಿಸಿಇ(ಐ) ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ, ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಎ. ರಾಜೇಶ್ ರೈ, ರಾಮ್ಕೋ ಸಿಮೆಂಟಿನ ತಾಂತ್ರಿಕ ಸೇವೆಯ ಡಿಜಿಎಂ ಸೂರಜ್ ಕುಮಾರ್ ಎ‌, ಮುಗ್ರೋಡಿ ಕನ್ ಸ್ಟ್ರಕ್ಷನಿನ ಸ್ಥಾಪಕ ಸುಧಾಕರ ಶೆಟ್ಟಿ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಸ್ಥಾಪಕ ಕೆ. ಮೋಹನ್ ಕುಮಾರ್, ಉಪ್ಪಿನಂಗಡಿ ಆದಿತ್ಯ ಎಂಟರ್ ಪ್ರೈಸಸ್ ನ ತ್ರಿವಿಕ್ರಮ ಇ. ಅತಿಥಿಯಾಗಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸಿಸಿಇ(ಐ) ಪುತ್ತೂರು ಸೆಂಟರ್ ಛೇರ್ ಮೆನ್ ಪ್ರಮೋದ್ ಕುಮಾರ್, ವೆಂಕಟ್ರಮಣ್, ರಕ್ಷಿತ್, ರಾಜಶೇಖರ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜನಾರ್ದನ ಪೂಜಾರಿ ಅವರಿಂದ ಕೋಮು ವೈಷಮ್ಯ ಬಿತ್ತುವ ಕೆಲಸ: ಎಚ್. ಮಹಮ್ಮದ್ ಆಲಿ | ಚರ್ಚ್’ನಲ್ಲಿ ದಫನವಿಲ್ಲ: ಮೌರಿಸ್ ಮಸ್ಕರೇನಸ್

ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…