ಕರಾವಳಿ

ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ರಸ್ತೆಗಳನ್ನು ಮರುಡಾಮರಿಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಅವರು ಸೂನೆ ನೀಡಿದ್ದಾರೆ, ಅದರಂತೆ ಶೀಘ್ರವೇ ಈ ಏಳು ರಸ್ತೆಗಳು ಮರುಡಾಮರೀಕರಣವಾಗಲಿದೆ.

akshaya college

ಯಾವೆಲ್ಲಾ ರಸ್ತೆಗಳು?

ಅರ್ಕದಿಂದ ಹಣಿಯಾರು ರಸ್ತೆ, ಪಾಟ್ರಿಕೋಡಿ- ಆನಡ್ಕ ರಸ್ತೆ, ಸಾಜದಿಂದ ಬುಳೇರಿಕಟ್ಟೆ ರಸ್ತೆ, ಅಳಕೆಮಜಲಿನಿಂದ ವಡ್ಯರ್ಪೆ ರಸ್ತೆ, ವಿನಾಯಕನಗರ ಮಠಂಂತಬೆಟ್ಟು- ದೋರ್ಮ ರಸ್ತೆ, ಪದಡ್ಕದಿಂದ ಮೈಂದನಡ್ಕ ರಸ್ತೆ ಹಾಗೂ ಪುತ್ತೂರು ಬೋಳಂತಾಯದಿಂದ ದರ್ಬೆ ತನದ ರಸ್ತೆಗಳು ಮರುಡಾಮರೀಕರಣವಾಗಲಿದೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಎಲ್ಲಾ ರಸ್ತೆಗಳನ್ನು ಮರುಡಾಮರೀಕರಣ ಮಾಡುವಂತೆ ಶಾಸಕರು ಸೂಚನೆ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಈ ಬಾರಿ ಮಳೆ ಹೆಚ್ಚಿರುವ ಕಾರಣ ರಸ್ತೆಗಳು ಹೊಂಡ ಬಿದ್ದಿದೆ, ಹೆಚ್ಚಾಗಿ ಹೊಂಡಗಳು ಬಿದ್ದಿರುವ ಏಳು ರಸ್ತೆಗಳನ್ನು ಮರುಡಾಮರೀಕರಣಕ್ಕೆ ಆದೇಶಿಸಲಾಗಿದೆ. ಮಾಣಿ- ಸಮಪಾಜೆ ರಾ. ಹೆದ್ದಾರಿ ೨೭೫ ರ ತೇಪೆ ಕಾಮಗಾರಿಗೂ ಸೂಚನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜನಾರ್ದನ ಪೂಜಾರಿ ಅವರಿಂದ ಕೋಮು ವೈಷಮ್ಯ ಬಿತ್ತುವ ಕೆಲಸ: ಎಚ್. ಮಹಮ್ಮದ್ ಆಲಿ | ಚರ್ಚ್’ನಲ್ಲಿ ದಫನವಿಲ್ಲ: ಮೌರಿಸ್ ಮಸ್ಕರೇನಸ್

ಪುತ್ತೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಪ್ರಕರಣದಲ್ಲಿ ಮುಸ್ಲಿಮ್ ಮತ್ತು…

ಧರ್ಮಸ್ಥಳ: ನೂರಾರು ಶವಗಳ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ- ಶಾಸಕ ಅಶೋಕ್ ರೈ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ…