Gl
ಕರಾವಳಿ

ಏಳು ರಸ್ತೆಗಳ ಮರುಡಾಮರೀಕರಣಕ್ಕೆ ಶಾಸಕರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ನಗರ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಳು ರಸ್ತೆಗಳನ್ನು ಮರುಡಾಮರಿಕರಣ ಮಾಡುವಂತೆ ಶಾಸಕರಾದ ಅಶೋಕ್ ರೈ ಅವರು ಸೂನೆ ನೀಡಿದ್ದಾರೆ, ಅದರಂತೆ ಶೀಘ್ರವೇ ಈ ಏಳು ರಸ್ತೆಗಳು ಮರುಡಾಮರೀಕರಣವಾಗಲಿದೆ.

Pashupathi

ಯಾವೆಲ್ಲಾ ರಸ್ತೆಗಳು?

akshaya college

ಅರ್ಕದಿಂದ ಹಣಿಯಾರು ರಸ್ತೆ, ಪಾಟ್ರಿಕೋಡಿ- ಆನಡ್ಕ ರಸ್ತೆ, ಸಾಜದಿಂದ ಬುಳೇರಿಕಟ್ಟೆ ರಸ್ತೆ, ಅಳಕೆಮಜಲಿನಿಂದ ವಡ್ಯರ್ಪೆ ರಸ್ತೆ, ವಿನಾಯಕನಗರ ಮಠಂಂತಬೆಟ್ಟು- ದೋರ್ಮ ರಸ್ತೆ, ಪದಡ್ಕದಿಂದ ಮೈಂದನಡ್ಕ ರಸ್ತೆ ಹಾಗೂ ಪುತ್ತೂರು ಬೋಳಂತಾಯದಿಂದ ದರ್ಬೆ ತನದ ರಸ್ತೆಗಳು ಮರುಡಾಮರೀಕರಣವಾಗಲಿದೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ಎಲ್ಲಾ ರಸ್ತೆಗಳನ್ನು ಮರುಡಾಮರೀಕರಣ ಮಾಡುವಂತೆ ಶಾಸಕರು ಸೂಚನೆ ನೀಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಈ ಬಾರಿ ಮಳೆ ಹೆಚ್ಚಿರುವ ಕಾರಣ ರಸ್ತೆಗಳು ಹೊಂಡ ಬಿದ್ದಿದೆ, ಹೆಚ್ಚಾಗಿ ಹೊಂಡಗಳು ಬಿದ್ದಿರುವ ಏಳು ರಸ್ತೆಗಳನ್ನು ಮರುಡಾಮರೀಕರಣಕ್ಕೆ ಆದೇಶಿಸಲಾಗಿದೆ. ಮಾಣಿ- ಸಮಪಾಜೆ ರಾ. ಹೆದ್ದಾರಿ ೨೭೫ ರ ತೇಪೆ ಕಾಮಗಾರಿಗೂ ಸೂಚನೆ ನೀಡಲಾಗಿದ್ದು ಕಾಮಗಾರಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿ ಕೆಲಸಗಳು ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು…

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ಮಂಗಳೂರು ಪೊಲೀಸ್‌ ಕಮಿಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ | ಕಾನೂನು ಎಲ್ಲರಿಗೂ ಒಂದೇ: ಸುಧೀರ್ ಕುಮಾರ್ ರೆಡ್ಡಿ

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ…