ಪುತ್ತೂರು: ಜೆಸಿಐ ಇಂಡಿಯಾ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಅತ್ಯುತ್ತಮ ತರಬೇತುದಾರರಿಗೆ ನೀಡುವ ಪ್ರೇರಣಾ ಪ್ರಶಸ್ತಿಯನ್ನು ಪುತ್ತೂರಿನ ಮಾರ್ಕ್ ಟೆಲಿಕಾಂ ಮಾಲಕ ಶಶಿರಾಜ್ ರೈ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಕಳದ ಹೋಟೆಲ್ ಬಾಲಾಜಿ ಇನ್’ನಲ್ಲಿ ಆ. 24ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜೆಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಗೌರವಿಸಿದರು.
ಜೆಸಿಐನಲ್ಲಿ ಅತ್ಯುತ್ತಮ ತರಬೇತುದಾರರಾಗಿ ನೂರಾರು ತರಬೇತಿ ನೀಡುತ್ತಾ ಬಂದಿರುವ ಶಶಿರಾಜ್ ರೈ ಅವರ ಸಾಧನೆಯನ್ನು ಗುರುತಿಸಿ, ಜೆಸಿಐ ಪುತ್ತೂರು ಘಟಕದಿಂದ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲಾಗಿತ್ತು.
ಪುತ್ತೂರು ಮುಖ್ಯರಸ್ತೆಯಲ್ಲಿರುವ ಮಾರ್ಕ್ ಟೆಲಿಕಾಂ ಮಾಲಕರಾಗಿರುವ ಇವರು, ಪತ್ನಿ ಸ್ವಾತಿ ಎಸ್. ರೈ, ಮಕ್ಕಳಾದ ಸಹರ್ ಎಸ್. ರೈ ಹಾಗೂ ಸಿಯಾರ ಎಸ್. ರೈ ಅವರೊಂದಿಗೆ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಇವರು ಜೆಸಿಐ ಪುತ್ತೂರು ಘಟಕದ ಪೂರ್ವಾಧ್ಯಕ್ಷ ಮುಂಡಾಲಗುತ್ತು ಮೋಹನ್ ರೈ ಮತ್ತು ಮುಂಡಾಲಗುತ್ತು ಕೃಷ್ಣಕುಮಾರಿ ಎಂ. ರೈ ದಂಪತಿ ಪುತ್ರ.