tamanvi
ಪ್ರಚಲಿತಸ್ಥಳೀಯ

ಪುತ್ತೂರ ಈಶನ ಮೊರೆ ಹೋದ ಅಸಹಾಯಕ ಹೆಣ್ಮಗಳು! ಜೀವನ ಹಾಳುಗೈದ ಸಮೀರ್’ಗೆ ಶಾಪ ಹಾಕಿ, ದೇವರಿಗೆ ಪತ್ರ!!ಪ್ರತಿಕ್ರಿಯೆ ನೀಡಿದ ಹಿಂದೂ ಸಂಘಟನೆಗಳು

D_shiva_bhat
ಜನರು ಸಂಕಷ್ಟಗಳನ್ನು ಹೇಳಿಕೊಳ್ಳುವುದು ಎಲ್ಲರ ರೂಢಿ, ಆದರೇ ಮಹಿಳೆಯೊಬ್ಬರು ತನ್ನ ಕಷ್ಟದ ಬಗ್ಗೆ ಚೀಟಿಯಲ್ಲಿ ಬರೆದು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಜನರು ಸಂಕಷ್ಟಗಳನ್ನು ಹೇಳಿಕೊಳ್ಳುವುದು ಎಲ್ಲರ ರೂಢಿ, ಆದರೇ ಮಹಿಳೆಯೊಬ್ಬರು ತನ್ನ ಕಷ್ಟದ ಬಗ್ಗೆ ಚೀಟಿಯಲ್ಲಿ ಬರೆದು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.

maithri

ಈ ಘಟನೆ ನಡೆದಿರುವುದು ಬೇರೆ ಎಲ್ಲಿಯೂ ಅಲ್ಲ ನಮ್ಮ ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ದೇವರ ಕಾಣಿಕೆ ಹುಂಡಿಯಲ್ಲಿ ಮಹಿಳೆಯೊಬ್ಬರು ಬರೆದಿದ್ದಾರೆನ್ನಲಾದ ಚೀಟಿವೊಂದು ದೊರಕಿದ್ದು, ಚೀಟಿಯಲ್ಲಿ ತಮಗಾದ ಅನ್ಯಾಯದ ಬರೆದುಕೊಂಡಿದ್ದಾರೆ.

ಸಮೀ‌ರ್ ಅನ್ನೋವನು ನನ್ನ ಜೀವನ ಹಾಳು ಮಾಡಿದ್ದಾನೆ. ಈವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದಿವಿ, ಅವನ ಜೀವನ ಕೂಡ ಹಾಳು ಆಗಬೇಕು ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೆ ಇದು ನನ್ನ ಪ್ರಾರ್ಥನೆ’ ಎಂದು ಬರೆಯಲಾಗಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಪ್ರತಿಕ್ರಿಯಿಸಿದ್ದು, ಅನ್ಯಾಯ ಆಗಿದ್ದರೆ ಸಂಪರ್ಕಿಸುವಂತೆ ತಿಳಿಸಿದೆ.

ಈ ಬಗೆಗಿನ ಸತ್ಯಾಂಶ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 157