ಪುತ್ತೂರು: ‘ರೂಟ್ ಕೆನಾಲ್’ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರ ‘ಪ್ರಶಾಂತ ದಂತ ಚಿಕಿತ್ಸಾಲಯ’ ಮಾರ್ಕೆಟ್ ರಸ್ತೆಯ ಟೌನ್ ಬ್ಯಾಂಕ್ ಬಳಿ ಇರುವ ಯೂನಿಯನ್ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ಫೆ. 5ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.
ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ, ಪ್ರಕಾಶ್ ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ. ಶ್ರೀಪ್ರಕಾಶ್ ಬಿ., ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು, ಯೂನಿಯನ್ ಕ್ಲಬ್ ಅಧ್ಯಕ್ಷರಾದ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಅತಿಥಿಗಳಾಗಿ ಉಪಸ್ಥಿತರಿರುವರು.
ದಂತಚಿಕಿತ್ಸಾಲಯದಲ್ಲಿ ಬಾಯಿ ಹಾಗೂ ಹಲ್ಲುಗಳ ತಪಾಸಣೆ, ಡಿಜಿಟಲ್ ಎಕ್ಸರೇ, ದಂತಕುಳಿ ತುಂಬಿಸುವುದು, ರೂಟ್ ಕೆನಾಲ್ / ಬೇರುನಾಳ ಚಿಕಿತ್ಸೆ, ಹಲ್ಲುಗಳನ್ನು ಕೀಳುವುದು, ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ಮಕ್ಕಳ ಹಲ್ಲಿನ ಚಿಕಿತ್ಸೆ, ಹಲ್ಲಿನ ಕ್ಯಾಪ್, ಬ್ರಿಡ್ಜ್, ಸೆಟ್ ಹಾಗೂ ಇಂಪ್ಲಾಂಟ್, ವಕ್ರದಂತ ಚಿಕಿತ್ಸೆ, ಹಲ್ಲುಗಳ ಸೌಂದರ್ಯವರ್ಧಕ ಚಿಕಿತ್ಸೆಗಳು ಲಭ್ಯವಿದೆ. ವಾರದ ರಜೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ರೂಟ್ ಕೆನಾಲ್ ಚಿಕಿತ್ಸೆ ಲಭ್ಯವಿರುತ್ತದೆ ಎಂದು ರೂಟ್ ಕೆನಾಲ್ ತಜ್ಞ ಡಾ. ಪ್ರಶಾಂತ ಶರ್ಮ ಅಜಕ್ಕಳ ತಿಳಿಸಿದ್ದಾರೆ.






















