ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಸಮೃದ್ಧಿ ಕಾಂಪ್ಲೆಕ್ಸ್’ನಲ್ಲಿ ಹನಿಬೆಲ್ ಡ್ರೆಸ್ಸಸ್ ಶುಭಾರಂಭಗೊಂಡಿತು.
ಅಶ್ಮಿ ಕಂಫರ್ಟ್ ಬಳಿಯ ಕಾಂಪ್ಲೆಕ್ಸ್’ನಲ್ಲಿ ನೂತನ ಮಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು.

ಪುರೋಹಿತ್ ರವಿರಾಮ್ ಭಟ್ ಕೆದಂಬಾಡಿ ಅವರು ಪೂಜಾ ವಿಧಿವಿಧಾನ ನೆವೇರಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಸಹಜ್ ರೈ ಬಳಜ್ಜ, ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಯುವರಾಜ್ ಪೆರ್ವೊತ್ತೋಡಿ, ನಿತಿಶ್ ಶಾಂತಿವನ, ಹರೀಶ್ ಬಿಜತ್ರೆ, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸಾರ್ಥಕ್ ರೈ ಅರಿಯಡ್ಕ, ಲೋಕೇಶ್ ಚಾಕೋಟೆ, ಪ್ರವೀಣ್ ಭಂಡಾರಿ, ಜಯಲಕ್ಷ್ಮಿ ಶಗ್ರಿತ್ತಾಯ, ಸುರೇಂದ್ರ ರೈ ನೇಸರ, ರಾಜೇಶ್ ಬನ್ನೂರು, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ, ಸಚಿನ್ ಪಾಪೆಮಜಲು, ನವೀನ್ ಭಂಡಾರಿ ಕುತ್ಯಾಡಿ, ಯುವರಾಜ್ ಪೂಂಜಾ ಗೋಳ್ತಿಲ, ಅಶೋಕ್ ರೈ ಸಾಮೆತ್ತಡ್ಕ, ಗಂಗಾಧರ ಶೆಟ್ಟಿ ಉಪ್ಪಳ, ಬೇಬಿಲತಾ ಶೆಟ್ಟಿ ಉಪ್ಪಳ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಅಕ್ಷಯ್ ರೈ ಜಾರತ್ತಾರು, ಶ್ರದ್ಧಾ ಎ. ಶೆಟ್ಟಿ ಜಾರತ್ತಾರು, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು, ಕವಿತಾ ಎಚ್. ರೈ ಜಾರತ್ತಾರು, ಚಂದ್ರಾವತಿ ರೈ, ಅಭಿಷೇಕ್ ರೈ ಜಾರತ್ತಾರು ಅತಿಥಿಗಳನ್ನು ಬರಮಾಡಿಕೊಂಡರು.
ಹನಿಬೆಲ್ ಡ್ರೆಸ್ಸಸ್ ಮಾಲಕ ಅಕ್ಷಯ್ ರೈ ಜಾರತ್ತಾರು ಮಾತನಾಡಿ, ನಮ್ಮಲ್ಲಿ ಪುರುಷರ ಸುಪ್ರಸಿದ್ದ ಕಂಪನಿಗಳ ಬ್ರಾಂಡೆಡ್ ವಿವಿಧ ವಿನ್ಯಾಸಗಳ ಸಿದ್ಧ ಉಡುಪುಗಳು, ಆಫರ್ ಮತ್ತು ಡಿಸ್ಕೌಂಟ್ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಸಾರ್ವಜನಿಕ ಬಂಧು ಮಿತ್ರರು, ಹಿತೈಷಿಗಳ ಸಹಕಾರ ಸಂಸ್ಥೆಯ ಮೇಲೆ ಸದಾ ಇರಬೇಕು ಎಂದು ಮನವಿ ಮಾಡಿಕೊಂಡರು.






















