ಸ್ಥಳೀಯ

ಪೆಟ್ರೋಲ್, ಡೀಸಿಲ್ ದರ ಇಳಿಸಲು ಪುರುಷೋತ್ತಮ್ ರೈ ಬೂಡಿಯಾರ್ ಆಗ್ರಹ

ಪೆಟ್ರೋಲ್, ಡೀಸಿಲ್, ಗ್ಯಾಸ್ ದರವನ್ನು ಇಳಿಸುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಖಂಡಿತಾ ಇದೆ. ಇದರಿಂದ ದೇಶದ ಶೇ. 90ರಷ್ಟು ಮಂದಿಗೆ ಪ್ರಯೋಜನ ಆಗಲಿದೆ ಎಂದು ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ರೈ ಬೂಡಿಯಾರ್ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೆಟ್ರೋಲ್, ಡೀಸಿಲ್, ಗ್ಯಾಸ್ ದರವನ್ನು ಇಳಿಸುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಖಂಡಿತಾ ಇದೆ. ಇದರಿಂದ ದೇಶದ ಶೇ. 90ರಷ್ಟು ಮಂದಿಗೆ ಪ್ರಯೋಜನ ಆಗಲಿದೆ ಎಂದು ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ರೈ ಬೂಡಿಯಾರ್ ಹೇಳಿದರು.

akshaya college

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಧಮ್, ತಾಕತ್ತು ಎನ್ನುವ ಅಂಡರ್ ವರ್ಲ್ಡ್ ಶಬ್ದ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಮತ್ತೆ ಅದೇ ಮಾತನ್ನು ಹೇಳುವುದಾದರೆ ಅಂತಹ ಧಮ್, ತಾಕತ್ ಇದ್ದರೆ ಪೆಟ್ರೋಲ್, ಡೀಸಿಲ್ ಹಾಗೂ ಗ್ಯಾಸಿನ ಬೆಲೆಯನ್ನು ಕೇಂದ್ರ ಸರಕಾರ ಇಳಿಸಬೇಕು. ಈ ಮೂಲಕ ಉತ್ತಮ ಸರಕಾರ ಎನ್ನುವುದನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಜನರೂ ಇದನ್ನು ಪ್ರಶ್ನಿಸಬೇಕು. ಜನರು ಕೇಳದೇ ಹೋದರೆ ಸರ್ಕಾರ ನೀಡುವುದೂ ಇಲ್ಲ. ಬೆಲೆ ಏರಿಕೆಯಿಂದ ನಿಜವಾಗಿ ಸಂಕಷ್ಟ ಅನುಭವಿಸುವವರು ಮಧ್ಯಮ ವರ್ಗದವರು. ನಮ್ಮ ಸಂಕಷ್ಟವನ್ನು ಸರಕಾರದ ಮುಂದೆ ಹೇಳುವ ಕೆಲಸ ಆಗಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುರಿಯ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಕೃಷ್ಣ ಭಂಡಾರಿ, ಇಬ್ರಾಹಿಂ ನೆಕ್ಕರೆ, ಅನಿಲ್ ಡಿಸೋಜಾ, ಮಾಯಿ ದೇ ದೆವುಸ್ ಚರ್ಚ್ ಸಂಟ್ಯಾರ್ ವಾಳೆಯದ ಮಾಜಿ ಗುರಿಕಾರ ಸುನಿಲ್ ಡಿಸೋಜಾ,


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

ಇಂದಿನಿಂದ ಪುತ್ತೂರು ಜೆಸಿಐನಿಂದ ಜೆಸಿ ಸಪ್ತಾಹ 2025 | ಸೆ. 14ರಂದು ಪುದ್ವಾರ್, ಸಾಂಸ್ಕೃತಿಕ ಕಾರ್ಯಕ್ರಮ, 15ರಂದು ಸಂಪನ್ನ

ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐ ಪುತ್ತೂರು ಘಟಕದ ವತಿಯಿಂದ ಸೆಪ್ಟೆಂಬರ್…

1 of 115