ಸ್ಥಳೀಯ

ಪೆಟ್ರೋಲ್, ಡೀಸಿಲ್ ದರ ಇಳಿಸಲು ಪುರುಷೋತ್ತಮ್ ರೈ ಬೂಡಿಯಾರ್ ಆಗ್ರಹ

D_shiva_bhat
ಪೆಟ್ರೋಲ್, ಡೀಸಿಲ್, ಗ್ಯಾಸ್ ದರವನ್ನು ಇಳಿಸುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಖಂಡಿತಾ ಇದೆ. ಇದರಿಂದ ದೇಶದ ಶೇ. 90ರಷ್ಟು ಮಂದಿಗೆ ಪ್ರಯೋಜನ ಆಗಲಿದೆ ಎಂದು ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ರೈ ಬೂಡಿಯಾರ್ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೆಟ್ರೋಲ್, ಡೀಸಿಲ್, ಗ್ಯಾಸ್ ದರವನ್ನು ಇಳಿಸುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಖಂಡಿತಾ ಇದೆ. ಇದರಿಂದ ದೇಶದ ಶೇ. 90ರಷ್ಟು ಮಂದಿಗೆ ಪ್ರಯೋಜನ ಆಗಲಿದೆ ಎಂದು ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ರೈ ಬೂಡಿಯಾರ್ ಹೇಳಿದರು.

maithri

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಧಮ್, ತಾಕತ್ತು ಎನ್ನುವ ಅಂಡರ್ ವರ್ಲ್ಡ್ ಶಬ್ದ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಮತ್ತೆ ಅದೇ ಮಾತನ್ನು ಹೇಳುವುದಾದರೆ ಅಂತಹ ಧಮ್, ತಾಕತ್ ಇದ್ದರೆ ಪೆಟ್ರೋಲ್, ಡೀಸಿಲ್ ಹಾಗೂ ಗ್ಯಾಸಿನ ಬೆಲೆಯನ್ನು ಕೇಂದ್ರ ಸರಕಾರ ಇಳಿಸಬೇಕು. ಈ ಮೂಲಕ ಉತ್ತಮ ಸರಕಾರ ಎನ್ನುವುದನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಜನರೂ ಇದನ್ನು ಪ್ರಶ್ನಿಸಬೇಕು. ಜನರು ಕೇಳದೇ ಹೋದರೆ ಸರ್ಕಾರ ನೀಡುವುದೂ ಇಲ್ಲ. ಬೆಲೆ ಏರಿಕೆಯಿಂದ ನಿಜವಾಗಿ ಸಂಕಷ್ಟ ಅನುಭವಿಸುವವರು ಮಧ್ಯಮ ವರ್ಗದವರು. ನಮ್ಮ ಸಂಕಷ್ಟವನ್ನು ಸರಕಾರದ ಮುಂದೆ ಹೇಳುವ ಕೆಲಸ ಆಗಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುರಿಯ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಕೃಷ್ಣ ಭಂಡಾರಿ, ಇಬ್ರಾಹಿಂ ನೆಕ್ಕರೆ, ಅನಿಲ್ ಡಿಸೋಜಾ, ಮಾಯಿ ದೇ ದೆವುಸ್ ಚರ್ಚ್ ಸಂಟ್ಯಾರ್ ವಾಳೆಯದ ಮಾಜಿ ಗುರಿಕಾರ ಸುನಿಲ್ ಡಿಸೋಜಾ,


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಮಹಿಳಾ ಪೊಲೀಸ್ ಠಾಣಾ ಹಿಂಭಾಗದಿಂದ ಹಿಂದೂ ರುದ್ರಭೂಮಿವರೆಗೆ ಕಾಂಕ್ರೀಟ್ ರಸ್ತೆ: ಶಾಸಕರಿಂದ ಪರಿಶೀಲನೆ

ಪುತ್ತೂರು: ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದ ಅಭಿವೃದ್ಧಿ ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ…

1 of 125