ಪುತ್ತೂರು: ಹಿಂದಿನ ವರ್ಷ ಬಲ್ನಾಡು ಉಳ್ಳಾಲ್ತಿ ದೈವಕ್ಕೆ ಚಿನ್ನದ ಮಲ್ಲಿಗೆ ಹಾರ ಸಮರ್ಪಿಸಿದ್ದು, ಈ ಬಾರಿ ದಂಡನಾಯಕ ದೈವದ ಸುರಿಯಕ್ಕೆ ಚಿನ್ನದ ಹೊದಿಕೆಯನ್ನು ಸಮರ್ಪಿಸಲಾಯಿತು.
ಬುಧವಾರ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳ್ಳಿಯ ಸುರಿಯಕ್ಕೆ ಚಿನ್ನದ ಹೊದಿಕೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮರ್ಪಣೆ ಮಾಡಲಾಯಿತು.
ದಂಡನಾಯಕ ದೈವಕ್ಕೆ ಸುರಿಯ ಪ್ರಧಾನ ಆಯುಧ. ಈ ಆಯುಧಕ್ಕೆ ಚಿನ್ನದ ಹೊದಿಕೆ ಹಾಕಿಸಬೇಕು ಎಂಬ ಭಕ್ತರ ಸಂಕಲ್ಪದಂತೆ ಹಿಂದಿ ಇದ್ದ ಬೆಳ್ಳಿಯ ಆಯುಧಕ್ಕೆ ಚಿನ್ನದ ಹೊದಿಕೆಯನ್ನು ಹಾಕಿಲಾಯಿತು.





















