ಪುತ್ತೂರು: ಬಹುವಚನಂ ಪುತ್ತೂರು, ದಿ. ಜಿ.ಎಲ್. ಆಚಾರ್ಯ ಜನ್ಮಶತಾಬ್ಧಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಾಮಿ ಕಲಾಮಂದಿರದ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆದ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ಜೂ. 7ರಂದು ಪುತ್ತೂರು ತೆಂಕಿಲ ದರ್ಶನ ಕಲಾಮಂದಿರದಲ್ಲಿ ಸಮಾರೋಪಗೊಂಡಿತು.
ಭಗವದರ್ಪಣೆ ನಡೆಸಿಕೊಟ್ಟ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಮನಸ್ಸಿಗೆ ಬೇಕಾದದ್ದು ಏಕಾಗ್ರತೆ, ಹೃದಯಕ್ಕೆ ಬೇಕಾದದ್ದು ಅನುಭವ. ಅನುಭವವನ್ನು ನಾವು ಪಡೆದಾಗಲೇ ಹೃದಯದ ಅರಿವು ನಮಗಾಗುವುದು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಕನ್’ಸ್ಟ್ರಕ್ಷನ್’ನ ವಸಂತ್ ಹಾಗೂ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವರದರಾಜ್ ಚಂದ್ರಗಿರಿ ಅನಿಸಿಕೆ ವ್ಯಕ್ತಪಡಿಸಿದರು.
ಬಹುವಚನಂನ ಡಾ. ಶ್ರೀಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರವಚನದ ಕೊನೆ ದಿನದ ಕಾರ್ಯಕ್ರಮವನ್ನು ವೀಣಾ ಬನ್ನಂಜೆ ನಡೆಸಿಕೊಟ್ಟರು.