pashupathi
ಧಾರ್ಮಿಕ

ಪುತ್ತೂರು ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಆಗಮಿಸಿದ ನಿಧಿಕುಂಭ ಮೆರವಣಿಗೆ | ನಿಧಿಕುಂಭಕ್ಕೆ ಸುವಸ್ತು ಅರ್ಪಿಸಿ ಧನ್ಯರಾದ ಭಕ್ತರು

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಂಗರಸರ ಆಡಳಿತದಲ್ಲಿ ಆರಾಧ್ಯ ದೇವಿಯಾಗಿ ಗುರುತಿಸಿಕೊಂಡಿದ್ದ ಶ್ರೀ ಮಹಾಕಾಳಿ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಶನಿವಾರ ನಿಧಿಕುಂಭ ಮೆರವಣಿಗೆ ನಡೆಯಿತು.

akshaya college

ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನಿಧಿಕುಂಭದ ಮೆರವಣಿಗೆ ಹೊರಟಿತು.

sri mahakali temple puttur

ಮುಖ್ಯರಸ್ತೆಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಸಾಗಿ, ಕೋರ್ಟ್ ರಸ್ತೆಗೆ ಪ್ರವೇಶಿಸಿದ ಮೆರವಣಿಗೆ, ಪುತ್ತೂರು ಸೆಂಟರ್ ಹಿಂಭಾಗದಲ್ಲಿರುವ ಶ್ರೀ ಮಹಾಕಾಳಿ ದೇವಿಯ ಸಾನಿಧ್ಯವನ್ನು ತಲುಪಿತು.

ಮೆರವಣಿಗೆಯ ಮುಂಭಾಗದಿಂದ ಘೋಷ ವಾಹನ ಸಾಗಿದರೆ, ಅದನ್ನು ಅನುಸರಿಸಿ ನಿಧಿಕುಂಭದ ವಾಹನ ಸಾಗಿತು. ನಂತರ ಕುಣಿತ ಭಜನೆಯ ತಂಡ, ಭಕ್ತರು ಮೆರವಣಿಗೆಯಲ್ಲಿ ಸಾಗಿದರು.

ನಿಧಿಕುಂಭ ಸಾಗಿ ಬರುತ್ತಿದ್ದಂತೆ, ಮೆರವಣಿಗೆ ನಡುವೆಯೇ ಭಕ್ತರು ಚಿನ್ನ, ಬೆಳ್ಳಿ, ನಾಣ್ಯ, ಮುಷ್ಠಿ ಕಾಣಿಕೆ, ನವರತ್ನ, ತಾಮ್ರದ ನಾಣ್ಯ ಮೊದಲಾದ ಸುವಸ್ತುಗಳನ್ನು ಅರ್ಪಿಸುತ್ತಿರುವುದು ಕಂಡುಬಂದಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಹಸಂತ್ತಡ್ಕ, ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ಕಾಮತ್, ಉಪಾಧ್ಯಕ್ಷರಾದ ನರೇಂದ್ರ ನಾಯಕ್, ಸುದೇಶ್ ಚಿಕ್ಕಪುತ್ತೂರು, ಖಜಾಂಚಿ ನಿತಿನ್ ಮಂಗಳ, ಅರ್ಚಕ ಬನ್ನಂಜೆ ರಾಮದಾಸ್ ಭಟ್, , ಭಾಮಿ ಅಶೋಕ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ನಾಳೆ ನಿಧಿಕುಂಭ ಪ್ರತಿಷ್ಠೆ:

ಮೇ 11ರಂದು ಬೆಳಿಗ್ಗೆ 8.26ಕ್ಕೆ ಷಡಾಧಾರ ಹಾಗೂ ನಿಧಿಕುಂಭ ಪ್ರತಿಷ್ಠೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ, ದೇವಸ್ಥಾನದ ಅಭಿವೃದ್ಧಿ ನಿಧಿ ಸಂಗ್ರಹ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…

91ನೇ ವರ್ಷದ ಪುತ್ತೂರು ಶಾರದೋತ್ಸವಕ್ಕೆ ಚಾಲನೆ | ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಶ್ರೀ ಶಾರದಾ ಮೂರ್ತಿ ಪ್ರತಿಷ್ಠೆ

ಪುತ್ತೂರು: ವರ್ಷಂಪ್ರತಿಯಂತೆ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಶಾರದೋತ್ಸವಕ್ಕೆ ಸೋಮವಾರ…