ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಮಿನಿಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಯ್ಯಪ್ಪ ದೇವರಿಗೆ ಮಹಾಪೂಜೆ, ಗುಳಿಗ ದೈವದ ನೇಮೋತ್ಸವ ಮಾ. 23ರಂದು ನಡೆಯಲಿದೆ.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಜ್ಯೋತಿಷಿ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೆ. ಉದಯ ನಾರಾಯಣ ಕಲ್ಲೂರಾಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸ್ಥಳ ಶುದ್ಧಿ ಪೂರ್ವಕ ಗಣಪತಿ ಹವನ ನಡೆದು ಭಜನೆ, ಮಧ್ಯಾಹ್ನ ಅಯ್ಯಪ್ಪ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಕ್ಷೇತ್ರ ರಕ್ಷಕ ಗುಳಿದ ದೈವದ ನರ್ತನ ಸೇವೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಹಾಗೂ ಮಿನಿಪದವು ಶ್ರೀ ಅಯ್ಯಪ್ಪ ಭಕ್ತವೃಂದದ ಪ್ರಕಟಣೆ ತಿಳಿಸಿದೆ.
ಕ್ಷೇತ್ರದ ಬಗ್ಗೆ:
ಸುಮಾರು 47 ವರ್ಷಗಳ ಹಿಂದೆ ಮಿನಿಪದವಿನಲ್ಲಿ ಅಯ್ಯಪ್ಪ ಭಜನಾ ಮಂದಿರವನ್ನು ಅನಂತ ನಾಯ್ಕ ಹಾಗೂ ಊರವರು ಸ್ಥಾಪಿಸಿದರು. ವರ್ಷದಲ್ಲಿ ಒಂದು ಬಾರಿ ಮಕರ ಸಂಕ್ರಮಣದ ಸಂದರ್ಭ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಾಲ ಈ ಮಂದಿರದಲ್ಲಿ ವಾಸ್ತವ್ಯವಿದ್ದು, ಶರಣುಘೋಷ, ಪಡಿಪೂಜೆ ಹಾಗೂ ಶಬರಿಮಲೆಗೆ ಹೋಗುವ ದಿನ ಗಣಪತಿ ಹೋಮ, ಅಯ್ಯಪ್ಪ ಪೂಜೆ, ಪಡಿಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದವು. ಕಾಲಾಂತರದಲ್ಲಿ ಈ ಕಾರ್ಯಕ್ರಮಗಳು ನಿಂತು ಹೋಗುವಂತಾಯಿತು.
ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಗುಡಿಯ ಎದುರು ಭಾಗದ ರಸ್ತೆಯಲ್ಲಿ ಹಾದುಹೋಗುವ ವಾಹನಗಳು ಅಪಘಾತಕ್ಕೆ ಒಳಗಾಗುವುದು ಹೆಚ್ಚತೊಡಗಿತು. ವಾಹನ ಸವಾರರು ಹಾಗೂ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಮನೆಯವರು ಭಯಬೀತರಾದರು. ಕಾರಣ ಏನೆಂದು ಜ್ಯೋತಿಷ್ಯ ಮುಖೇನ ತಿಳಿದಾಗ, ಮುಂಚಿನಿಂದಲೂ ನಡೆದುಕೊಂಡು ಬರುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯದಿ ಅನ್ನದಾನ ಸೇವೆಗಳು ನಿಂತು ಹೋಗಿರುವುದೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂತು. ಆ ನಂತರದಲ್ಲಿ ಊರವರನ್ನು ಒಟ್ಟು ಸೇರಿಕೊಂಡು ವರ್ಷಪೂರ್ತಿ ಆಗಾಗ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ತದನಂತರ ಯಾವುದೇ ಅಪಘಾತಗಳು ಈ ಪರಿಸರದಲ್ಲಿ ಸಂಭವಿಸಿಲ್ಲ.
ಬಳಿಕ ಸ್ಥಳೀಯರು ಸೇರಿಕೊಂಡು ಅಯ್ಯಪ್ಪ ಸೇವಾ ಟ್ರಸ್ಟ್ (ರಿ.) ಮಿನಿಪದವು ಎಂಬ ಹೆಸರಿನಲ್ಲಿ ರಿಜಿಸ್ಟರ್ಡ್ ಬಾಡಿಯನ್ನು ಸ್ಥಾಪಿಸಿ, 2024ರ ಜನವರಿಯಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ.
ಮಿನಿಪದವು: ಮಾ. 23ರಂದು ಶ್ರೀ ಅಯ್ಯಪ್ಪ ಸಾನಿಧ್ಯದಲ್ಲಿ ಗುಳಿಗ ದೈವದ ನೇಮೋತ್ಸವ
Related Posts
ಹತ್ತೂರ ಒಡೆಯನ ಪುತ್ತೂರು ಜಾತ್ರೆ ಆರಂಭ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗುರುವಾರ ಬೆಳಿಗ್ಗೆ ಧ್ವಜಾರೋಹಣ…
ಶ್ರೀ ರಾಮ ನವಮಿ ಪ್ರಯುಕ್ತ ಸಮರ ಸೌಗಂಧಿಕಾ ತಾಳಮದ್ದಳೆ
ಶ್ರೀ ರಾಮ ನವಮಿಯ ಪ್ರಯುಕ್ತ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು ಪುತ್ತೂರು ಇದರ…
ಪುತ್ತೂರು ಜಾತ್ರೆಯಲ್ಲಿ ಡ್ರೋಣ್’ಗೆ ನಿರ್ಬಂಧ!| ಕೆರೆ ಸಮೀಪ ಅನ್ನಸಂತರ್ಪಣೆ, ಹೆಚ್ಚಿದೆ ಬ್ರಹ್ಮರಥೋತ್ಸವ ಸೇವೆ! | ಮುಖ್ಯರಸ್ತೆಗೆ ದೀಪಾಲಂಕಾರ, ಜಾತ್ರೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ಸೂಚನೆ
ಪುತ್ತೂರು ಶ್ರೀ ಮಹಾಲಿಂಗೇಶರ ದೇವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ದೇವಳದಲ್ಲಿ ಶಾಸಕ…
ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ರಚನೆ
ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಮಾ.8ರಂದು ನಡೆಯುವ 9ನೇ ವರ್ಷದ…
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಚುನಾವಣೆ | ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಪ್ರಚಾರದ ಮೊದಲ ಹಂತದಲ್ಲೇ ಮೇಲುಗೈ | ಮಂಗಳೂರು ಪ್ರತಿನಿಧಿಯಾಗಿ ಮಹೇಶ್ ಕಜೆ ಅವಿರೋಧ ಆಯ್ಕೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ಏಪ್ರಿಲ್…
ವೈಭವದಿಂದ ನಡೆದ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮ
ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ನೇತೃತ್ವದಲ್ಲಿ ಕರ್ನಪ್ಪಾಡಿ…
ನೆಕ್ಕಿಲ್: ರಾಜಾ ಗುಳಿಗ ದೈವದ ನೇಮ
ಕುರಿಯ ಗ್ರಾಮದ ಬೈಲಾಡಿ ನೆಕ್ಕಿಲ್ ಶ್ರೀ ರಾಜಾ ಗುಳಿಗ ಸಾನಿಧ್ಯದಲ್ಲಿ ಭಾನುವಾರ ರಾಜಾ ಗುಳಿಗ…
ಮಾ. 12, 13ರಂದು ಕೋಟಿ – ಚೆನ್ನಯರು ನಡೆದಾಡಿದ ಕರ್ನಪ್ಪಾಡಿ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ
ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ವತಿಯಿಂದ ಶ್ರೀ…
ದಂಬೆತ್ತಿಮಾರ್’ದ ಮಾಯ್ಕಾರೆ ಅಜ್ಜೆ ಕೊರಗ ತನಿಯ ಕ್ಷೇತ್ರಕ್ಕೆ ಬೆಳ್ಳಿಯ ಗೋಂಪರ್! ಇಂದು ರಾತ್ರಿ ಚೌಕಾರ್ ಮಂತ್ರವಾದಿ ಗುಳಿಗ ಕಲ್ಲುರ್ಟಿ ನೇಮ, ನಾಳೆ ಕೊರಗಜ್ಜನ ನೇಮ
ಆರ್ಯಾಪು ಗ್ರಾಮದ ಸಂಪ್ಯ ದಂಬೆತ್ತಿಮಾರ್'ದ ಮಾಯ್ಕಾರೆ ಅಜ್ಜೆ ಕೊರಗ ತನಿಯ ಕ್ಷೇತ್ರಕ್ಕೆ…
ಶ್ರೀ ಮಹಾವಿಷ್ಣು ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ. 13ರಂದು ನಡೆಯಲಿರುವ ಶ್ರೀ ಮಹಾವಿಷ್ಣು ಯಾಗ ಮತ್ತು…