Gl harusha
ದೇಶ

ಪಾಕ್‌ ಆಕ್ರಮಿತ ಕಾಶ್ಮೀರ (ಪಿಓಕೆ)ವನ್ನು ಹಿಂದಿರುಗಿಸಿ ಎನ್ನುವುದೇ ಮುಂದಿನ ನಡೆ

ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಬಗ್ಗಲ್ಲ, ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಾಲ ಬಿಚ್ಚಿದರೆ ಉಗ್ರರ ಜತೆಗೆ ಉಗ್ರ ಪೋಷಕ ದೇಶಕ್ಕೂ ಭಾರಿ ಮಾರಿ ಹಬ್ಬ ಕಾದಿದೆ ಎಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಬಗ್ಗಲ್ಲ, ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಾಲ ಬಿಚ್ಚಿದರೆ ಉಗ್ರರ ಜತೆಗೆ ಉಗ್ರ ಪೋಷಕ ದೇಶಕ್ಕೂ ಭಾರಿ ಮಾರಿ ಹಬ್ಬ ಕಾದಿದೆ ಎಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.

Pashupathi
akshaya college

ಪಾಕ್‌ ವಿರುದ್ಧ ‘ಆಪರೇಷನ್‌ ಸಿಂದೂರ’ ಬಳಿಕ ಮೊದಲ ಬಾರಿಗೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಾಚರಣೆಯಿಂದ ಪಾಕ್‌ ಅನುಭವಿಸಿರುವ ಮರ್ಮಾಘಾತ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಭಾರತದ ಮುಂದಿನ ನಡೆಯ ಬಗ್ಗೆ ಪ್ರಖರ ಮಾತುಗಳಲ್ಲಿ ವಿವರಿಸಿದರು. ಭಾರತೀಯ ಸೇನೆಯ ಶೌರ್ಯ ಸಾಹಸ, ಭಾರತೀಯರ ಒಗ್ಗಟ್ಟಿನ ಶಕ್ತಿಯನ್ನು ಕೊಂಡಾಡಿದ ಪ್ರಧಾನಿ, ”ಭಾರತದ ಪರಾಕ್ರಮಿ ಸೇನೆಗೆ, ಸಶಸ್ತ್ರ ಪಡೆಗೆ, ನಮ್ಮ ಗುಪ್ತಚರ ಇಲಾಖೆಗೆ, ನಮ್ಮ ವಿಜ್ಞಾನಿಗಳಿಗೆ ಸಮಸ್ತ ಭಾರತೀಯರ ಪರವಾಗಿ ವಂದಿಸುತ್ತೇನೆ ಎಂದು ಕೊಂಡಾಡಿದರು.

ಪ್ರಮುಖ ಅಂಶಗಳು ಏನೇನು?

1)ಕಾಶ್ಮೀರ ಹಿಂದಿರುಗಿಸುವ ಬಗ್ಗೆ ಮುಂದಿನ ಮಾತು:

ಪಾಕಿಸ್ತಾನದ ಜತೆ ಮುಂದಿನ ಮಾತುಕತೆ ಏನಿದ್ದರೂ ಅದು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವ ಬಗ್ಗೆ ಮತ್ತು ಉಗ್ರರ ವಿರುದ್ಧ ಕ್ರಮದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ನೆರೆ ದೇಶಕ್ಕೆ ಖಡಕ್‌ ಸಂದೇಶ ರವಾನಿಸಿದ್ದಾರೆ. ‘ಯಾವುದೇ ಅಣ್ವಸ್ತ್ರ ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪಾಕ್‌ ವಿರುದ್ಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ನೆರೆ ದೇಶದ ವರ್ತನೆಯ ಆಧಾರದ ಮೇಲೆ ನಮ್ಮ ಮುಂದಿನ ನಡೆ ನಿರ್ಧಾರವಾಗಲಿದೆ. ‘ಆಪರೇಷನ್‌ ಸಿಂದೂರ’ ಈಗ ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿಯಾಗಿದೆ,” ಎಂದು ಗುಡುಗಿದ್ದಾರೆ.

2)ಯುದ್ಧ ನಿಲ್ಲಿಸಲು ಕಾರಣ ಅಮೆರಿಕ ಮಧ್ಯಸ್ಥಿತಿಕೆ ಅಲ್ಲ:

”ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ಬೇಡಿಕೊಂಡಿತು. ಮುಂದೆ ಇಂತಹ ದುಸ್ಸಾಹಸ ಮಾಡುವುದಿಲ್ಲವೆಂದು ಭರವಸೆ ನೀಡಿದ ಬಳಿಕವಷ್ಟೇ ಭಾರತ ದಾಳಿ ನಿಲ್ಲಿಸಿತು,” ಎಂದು ಮೋದಿ ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಬಳಿಕ ಭಾರತ ಪಾಕ್‌ ವಿರುದ್ಧ ದಾಳಿ ನಿಲ್ಲಿಸಿತೆಂಬ ವಾದವನ್ನು ಅವರು ಪರೋಕ್ಷವಾಗಿ ತಳ್ಳಿಹಾಕಿದರು.

3)ದೇಶದ ಹೆಣ್ಣು ಮಕ್ಕಳಿಗೆ ಅರ್ಪಣೆ:

‘ಆಪರೇಷನ್‌ ಸಿಂದೂರ’ವನ್ನು ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಿಸುವುದಾಗಿ ಮೋದಿ ಹೇಳಿದ್ದಾರೆ. ”ಇಂದು, ನಾನು ಈ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ, ಸಾಹಸವನ್ನು ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ಮತ್ತು ದೇಶದ ಪ್ರತಿಯೊಬ್ಬ ಮಗಳಿಗೆ ಅರ್ಪಿಸುತ್ತೇನೆ,” ಎಂದು ಹೇಳಿದ್ದಾರೆ.

4) ಸಿಂದೂರ ಅಳಿಸಿದ್ದರ ಪರಿಣಾಮ ಅರಿವಾಗಿದೆ:

”ಪಹಲ್ಗಾಮ್‌ ದಾಳಿಯು ಭಯೋತ್ಪಾದನೆಯ ಅತ್ಯಂತ ಕ್ರೂರ ಮುಖವಾಗಿದೆ. ಇದು ನನಗೆ ವೈಯಕ್ತಿಕವಾಗಿಯೂ ಅತ್ಯಂತ ಘಾಸಿ ಉಂಟು ಮಾಡಿದೆ. ಆದರೆ, ಶತ್ರುಗಳಿಗೆ ಈಗ ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದರ ಪರಿಣಾಮ ಏನೆಂಬುದು ಎಂಬುದು ಚೆನ್ನಾಗಿ ಅರ್ಥವಾಗಿದೆ,” ಎಂದು ಮೋದಿ ಹೇಳಿದ್ದಾರೆ.

5)ವ್ಯಾಪಾರ, ರಾಜತಾಂತ್ರಿಕ ಸಮರ ನಿಂತಿಲ್ಲ:

ಪಾಕ್‌ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆ ನಿಂತರೂ, ರಾಜತಾಂತ್ರಿಕ, ವ್ಯಾಪಾರ ಮತ್ತು ಜಲ ಸಮರ ಮುಂದುವರಿಯಲಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಭಯೋತ್ಪಾದನೆ-ಸಂಧಾನ ಮಾತುಕತೆ(ಟೆರರ್‌-ಟಾಕ್‌) ಭಯೋತ್ಪಾದನೆ-ವ್ಯಾಪಾರ ಸಂಬಂಧ(ಟೆರರ್‌-ಟ್ರೇಡ್‌) ಹಾಗೂ ರಕ್ತ ಮತ್ತು ನೀರು (ಸಿಂಧೂ ಜಲ ಒಪ್ಪಂದ) ಒಟ್ಟಿಗೆ ಸಾಗುವುದಿಲ್ಲ ಎಂದು ಹೇಳಿದ್ದಾರೆ.

6) ಭಾರತದ ಸಾಮರ್ಥ್ಯ ಮತ್ತು ಸಂಯಮ ಎರಡನ್ನೂ ಜಗತ್ತು ನೋಡಿದೆ.

7) ನಮ್ಮ ಕ್ಷಿಪಣಿಗಳು, ಡ್ರೋನ್‌ಗಳು ಉಗ್ರರ ಕಟ್ಟಡಗಳನ್ನು ಮಾತ್ರ ಉರುಳಿಸಿಲ್ಲ, ಅವರ ಧೈರ್ಯವನ್ನೂ ಪುಡಿಗಟ್ಟಿವೆ. ಒಂದೇ ಏಟಿನಲ್ಲಿ ಸ್ವೇಚ್ಛೆಯಾಗಿ ತಿರುಗಾಡುತ್ತಿದ್ದ ಉಗ್ರ ಮುಖಂಡರನ್ನು ಹೊಡೆದುರುಳಿಸಿದ್ದೇವೆ.

8) ಉಗ್ರರು ಕನಸಿನಲ್ಲೂ ಭಾರತ ಈ ಮಟ್ಟದಲ್ಲಿ ದಾಳಿ ನಡೆಸಬಹುದೆಂದು ಊಹಿಸಿರಲಿಲ್ಲ.

9)ಪಾಕಿಸ್ತಾನದ ಹೃದಯಕ್ಕೆ ಹೋಗಿ ಹೊಡೆದಿದ್ದೇವೆ. ಉಗ್ರರು ಪಾಕ್‌ ಹೃದಯ ಭಾಗದಲ್ಲಿದ್ದರೂ ಬಿಡುವುದಿಲ್ಲವೆಂದು ತೋರಿಸಿದ್ದೇವೆ. ಪಾಕಿಸ್ತಾನದ ಅಸಲಿ ಮುಖವೇನೆಂಬುದು ಜಗತ್ತಿನ ಮುಂದೆ ಬಹಿರಂಗವಾಗಿದೆ.

10)ಇದು ಯುದ್ಧದ ಸಮಯವಲ್ಲ. ಹಾಗೆಯೇ ಭಯೋತ್ಪಾದನೆಗೂ ಇದು ಸಮಯವಲ್ಲ.

11)’ಆಪರೇಷನ್‌ ಸಿಂದೂರ’ ಅಖಂಡ ನ್ಯಾಯದ ಸಂಕಲ್ಪ. ಮೇ 7ರಂದು ನಮ್ಮ ಸಂಕಲ್ಪದ ಶಕ್ತಿ ಏನೆಂಬುದು ಜಗತ್ತಿಗೆ ಗೊತ್ತಾಗಿದೆ.

12) ‘ಆಪರೇಷನ್‌ ಸಿಂದೂರ’ ಕೇವಲ ಹೆಸರಲ್ಲ. ಅದು ದೇಶದ ಕೋಟ್ಯಾಂತರ ಜನರ ಭಾವನೆಯ ಪ್ರತಿಬಿಂಬ.

13)’ದೇಶ ಮೊದಲು’ ಎಂಬ ಸಂಕಲ್ಪ ನಮ್ಮೆಲ್ಲರದ್ದಾಗಿದ್ದರೆ, ಉಕ್ಕಿನಂತಹ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಎಂಬುದು ಸಾಬೀತಾಗಿದೆ.

14)ಶಕ್ತಿಯಿಂದ ಶಾಂತಿ ಸಾಧನೆ – ಇದು ಭಾರತದ ಹೊಸ ಮಂತ್ರ – ಮೇಡ್‌ ಇನ್‌ ಇಂಡಿಯಾ ಡಿಫೆನ್ಸ್‌ ಸಾಧನಗಳ ಬಳಕೆ ಸಮಯ ಬಂದಿದೆ.

15 ಸರ್ಜಿಕಲ್‌ ಸ್ಟ್ರೈಕ್‌, ಏರ್‌ ಸ್ಟ್ರೈಕ್‌ ಬಳಿಕ ಆಪರೇಷನ್‌ ಸಿಂದೂರ್‌ ಉಗ್ರರ ವಿರುದ್ಧ ಭಾರತದ ಹೊಸ ನೀತಿ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಭಾರತದ ಹೊಸ ಪ್ರಯೋಗ ಸಮುದ್ರಯಾನ | ಆಗರ್ಭ ಶ್ರೀಮಂತವಾಗಲಿದೆಯೇ ನಮ್ಮ ದೇಶ? ಕುತೂಹಲ ಹೆಚ್ಚಿಸಿದೆ ಹತ್ತು ಹಲವು ವಿಶೇಷತೆಗಳ ಈ ಯಾನ!

ಯಾನಗಳ ಜಗತ್ತಿನಲ್ಲಿ ಹೊಸ ಹೊಸ ಸಾಧನೆ ಮಾಡುತ್ತಿರುವ ಭಾರತ, ಇದೀಗ ಸಮುದ್ರಯಾನಕ್ಕೆ ಮುಂದಾಗಿದೆ.…