ರೋಟರಿ ನರ್ಸರಿ ಶಾಲೆಯಲ್ಲಿ ಮಕ್ಕಳ ಸಂತೆ ನಡೆದಿದ್ದು, ಮಕ್ಕಳೇ ಸ್ವತಃ ತರಕಾರಿ ವ್ಯಾಪಾರ ನಡೆಸಿದರು.
ರೋಟರಿ ಕ್ಲಬ್ ತೀರ್ಥಹಳ್ಳಿ ಇದರ ಅಧ್ಯಕ್ಷ ಅನಿಲ್ ಕುಮಾರ್, ರೋಟರಿ ನರ್ಸರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್, ರೋಟರಿ ಕ್ಲಬ್ ತೀರ್ಥಹಳ್ಳಿಯ ಪೂರ್ವಧ್ಯಕ್ಷ ಮನೋಜ್ ಆಚಾರ್ಯ, ಕಳೆದ ಸಾಲಿನ ಕಾರ್ಯದರ್ಶಿ ಮಂಜುನಾಥ್, ರೋಟರಿ ಐ.ಎಂ.ಎ ಬ್ಲಡ್ ಬ್ಯಾಂಕ್ ನ ಸಿಬ್ಬಂದಿ ಅರುಣ್, ಅಭಿಷೇಕ್ ಮತ್ತು ಮಕ್ಕಳ ಪೋಷಕರು ತರಕಾರಿ ಖರೀದಿಸಿದರು.
ರೋಟರಿ ನರ್ಸರಿ ಶಾಲಾ ಮುಖ್ಯಶಿಕ್ಷಕಿ ಶ್ವೇತಾ ಮನೋಜ್ ಆಚಾರ್ಯ ಕಾರ್ಯಕ್ರಮ ಆಯೋಜಿಸಿದ್ದರು. ಸಹಾಯಕರಾದ ಶಾಹಿನಾ, ಆಫ್ಸನಾ ಕಾರ್ಯಕ್ರಮಕ್ಕೆ ಸಹಕರಿಸಿದರು.
























