Gl
ಕರಾವಳಿ

ಕನ್ನಡಕ್ಕೆ ಮತ್ತೊಂದು ಏಟು ನೀಡಿದ ಕೇರಳ ಸರಕಾರ!!ಕಾಸರಗೋಡು ಕನ್ನಡಿಗರ ಮೇಲಿನ ದಬ್ಬಾಳಿಕೆ ಮುಂದುವರಿಕೆ!

ಕನ್ನಡಿಗರ ಮೇಲೆ ಕೇರಳ ಸರಕಾರದ ದಬ್ಬಾಳಿಕೆ ಮುಂದುವರಿದಿದ್ದು, ಈಗ ಕನ್ನಡಿಗರಿಂದ ಕನ್ನಡಿಗರಿಗೆ ಸಿಗುತ್ತಿದ್ದ ಸೌಲಭ್ಯ ಮತ್ತು ಕನ್ನಡಿಗರ ಉದ್ಯೋಗವನ್ನು ಕಸಿಯಲೂ ಮುಂದಡಿ ಯಿಟ್ಟಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ಕನ್ನಡಿಗರ ಮೇಲೆ ಕೇರಳ ಸರಕಾರದ
ದಬ್ಬಾಳಿಕೆ ಮುಂದುವರಿದಿದ್ದು, ಈಗ ಕನ್ನಡಿಗರಿಂದ ಕನ್ನಡಿಗರಿಗೆ ಸಿಗುತ್ತಿದ್ದ ಸೌಲಭ್ಯ ಮತ್ತು ಕನ್ನಡಿಗರ ಉದ್ಯೋಗವನ್ನು ಕಸಿಯಲೂ ಮುಂದಡಿ ಯಿಟ್ಟಿದೆ. ಇದುವರೆಗೆ ಚಾಲ್ತಿ ಯಲ್ಲಿದ್ದ ಕನ್ನಡ ಬಲ್ಲ ಸಿಬ್ಬಂದಿ ನೇಮಕದ ಸಂಖ್ಯೆಯನ್ನು ಕನಿಷ್ಠಗೊಳಿಸಲು ಸರಕಾರ ಪ್ರಯತ್ನಿಸುತ್ತಿದ್ದು, ಆದೇಶವನ್ನೇ ಹೊರಡಿಸಿದೆ. ಇನ್ನು ಇಲ್ಲಿ ಕನ್ನಡದ ಅರ್ಜಿಗಳೂ ಮಾನ್ಯಗೊಳ್ಳ ದಿರುವ ಸಾಧ್ಯತೆ ಇದೆ

akshaya college

ಸರಕಾರಿ ಕಚೇರಿಗಳಿಗೆ ಬರುವ ಕನ್ನಡದಲ್ಲಿ ಬರೆದಿರುವ ಅರ್ಜಿಗಳ ಸಂಖ್ಯೆಯನ್ನು ನೋಡಿ ಇನ್ನು ಮುಂದೆ ಕನ್ನಡ ಬಲ್ಲ ಸಿಬ್ಬಂದಿ ಹುದ್ದೆ ಮಂಜೂರು ಮಾಡಿದರೆ ಸಾಕು ಎಂಬ ಹೊಸ ಆದೇಶವನ್ನು ಸರಕಾರ ಹೊರಡಿಸಿದೆ.

ಪರಿಣಾಮವಾಗಿ ಕನ್ನಡಿಗರಿಗೆ ಮೀಸಲಿದ್ದ ಸರಕಾರಿ ಹುದ್ದೆ ಅವರ ಕೈತಪ್ಪುವಂತಾಗಿದೆ. ಇದು ಪರೋಕ್ಷವಾಗಿ ಕನ್ನಡಿಗರು ಸರಕಾರದ ಹಲವು ಸವಲತ್ತುಗಳಿಂದ ವಂಚಿತರಾಗುವಂತೆ ಮಾಡಲಿದೆ. ಮಾತ್ರವಲ್ಲದೆ ಇನ್ನು ಮುಂದೆ ಕನ್ನಡಿಗರು ಅರ್ಜಿ ಬರೆಯಲು ಮಲಯಾಳ ಅಥವಾ ಇಂಗ್ಲಿಷ್‌ ಬಲ್ಲವರಲ್ಲಿ ಅಂಗಲಾಚುವ ಪರಿಸ್ಥಿತಿ ಉದ್ಭವವಾಗುತ್ತದೆ. ಅರ್ಜಿಗಳ ಸಂಖ್ಯೆಯನ್ನು ನೋಡಿ ಭಾಷಾ ಅಲ್ಪ ಸಂಖ್ಯಾಕ ಕನ್ನಡ -ಮಲಯಾಳ / ತಮಿಳು ಮಲಯಾಳ ಕ್ಲರ್ಕ್ ಹುದ್ದೆಯ ಅಗತ್ಯದ ಕುರಿತು ಪರಿಶೀಲಿಸಿ, ಎಷ್ಟು ಹುದ್ದೆ ಅಗತ್ಯವಿದೆ ಎಂದು ಒಂದು ತಿಂಗಳೊಳಗೆ ತಿಳಿಸುವಂತೆ ಇಲಾಖೆಗೆ ಸೂಚಿಸಿದೆ.

ಕಾರಣವೇನು?

ಕನ್ನಡಿಗರಿಗೆ ಕನ್ನಡದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಅವುಗಳನ್ನು ನೋಡಿ ಪರಿಗಣಿ ಸುವ ಕನ್ನಡ ಬಲ್ಲ ಸಿಬ್ಬಂದಿ ಸಾಕಷ್ಟಿಲ್ಲದಿರುವುದು ಸಮಸ್ಯೆಗೆ ಕಾರಣ.

ಕೆಲವು ಕಡೆ ಸಿಬ್ಬಂದಿ ತಮಗೆ ಕನ್ನಡ ಬರುವುದಿಲ್ಲ ಎಂದು ಸಾರಾಸಗಟಾಗಿ ತಿಳಿಸುತ್ತಾರೆ. ಆದುದರಿಂದ ಕನ್ನಡಿಗರು ಅನಿವಾರ್ಯವಾಗಿ ಅನ್ಯರ ಸಹಕಾರ ಪಡೆದು ಮಲಯಾಳ ಅಥವಾ ಆಂಗ್ಲ ಭಾಷೆಯಲ್ಲೇ ಅರ್ಜಿ / ಕಡತಗಳನ್ನು ಸಿದ್ಧ ಪಡಿಸಿ ಸಲ್ಲಿಸುತ್ತಾರೆ. ಇದರಿಂದ ಸಹಜವಾಗಿಯೇ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ಕಡಿಮೆಯಾಗುತ್ತಿವೆ. ಈಗ ಸರಕಾರ ಇದನ್ನೇ ನೆಪವಾಗಿರಿಸಿ ಕನ್ನಡ – ಮಲಯಾಳ ಉಭಯ ಭಾಷೆ ಬಲ್ಲ ಸಿಬ್ಬಂದಿಯ ಹುದ್ದೆ ಸಂಖ್ಯೆ ಕಡಿತ ಮಾಡಲು ಹೊರಟಿದೆ.

ಶೇ. 50ರಷ್ಟು ಹುದ್ದೆ ಮೀಸಲು- ಶೇ. 10ರಷ್ಟೂ ಇಲ್ಲ
ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿರುವ ಎಲ್ಲ ಸರಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಕನ್ನಡ ಬಲ್ಲವರಿಗೆ ನೀಡಬೇಕು ಎಂದು 2013ರಲ್ಲಿ ಸರಕಾರ ಸುತ್ತೋಲೆ ಹೊರಡಿಸಿತ್ತು. ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳಲ್ಲಿರುವ ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲವರು ಶೇ. 50ರಷ್ಟು ಬೇಕಾಗಿದ್ದರೂ ಶೇ. 10ರಷ್ಟೂ ಕನ್ನಡಿಗರಿಲ್ಲ. ಈ ಎರಡು ತಾಲೂಕುಗಳಲ್ಲಿರುವ 19 ಗ್ರಾಮ ಪಂಚಾಯತ್‌ಗಳಲ್ಲಿ 19 ಮಂದಿ ಕನ್ನಡ ಬಲ್ಲವರು ಇರಬೇಕು. ಆದರೆ ಇಲ್ಲಿ ಕೆಲವೇ ಕೆಲವು ಮಂದಿಯಷ್ಟೇ ಇದ್ದಾರೆ.

ಮಾಹಿತಿ ನೀಡದ ಇಲಾಖೆ

ಕಾಸರಗೋಡಿನ ಕಂದಾಯ ಇಲಾಖೆಯಲ್ಲಿ 52 ಮಂದಿ, ಕೃಷಿ ಇಲಾಖೆಯಲ್ಲಿ 16 ಮಂದಿ ಕನ್ನಡ ಬಲ್ಲವರು ಇರಬೇಕು. ಆದರೂ ಪೂರ್ಣ ಪ್ರಮಾಣದಲ್ಲಿ ಇದು ಈಡೇರಿಲ್ಲ. ಹಲವು ಇಲಾಖೆಗಳಲ್ಲಿ ಖಾಲಿ ಇರುವ ಕನ್ನಡ ಬಲ್ಲವರ ಹುದ್ದೆಗಳ ಅಂಕಿ -ಅಂಶವನ್ನು ಲೋಕಸೇವಾ ಆಯೋಗ (ಪಿಎಸ್‌ಸಿ)ಕ್ಕೆ ಆಯಾ ಇಲಾಖೆ ನೀಡಿಲ್ಲ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 108 ಮಂದಿಯನ್ನು ಬ್ಯಾಂಕ್ ಪಟ್ಟಿಯಲ್ಲಿ ಸೇರಿಸಲಾಗಿದ್ದರೂ ಈ ತನಕ ನೇಮಕ ಆಗಿಲ್ಲ. ಕೆಲವು ಇಲಾಖೆಗಳಲ್ಲಿ ಕನ್ನಡ ಬಲ್ಲ ಹುದ್ದೆಗಳಾಗಿ ಪರಿವರ್ತಿಸಬೇಕಿದ್ದರೂ ಅದೂ ನಡೆದಿಲ್ಲ

ಏನಿದು ಬೆಳವಣಿಗೆ?


-ಕನ್ನಡಿಗರ ಮೇಲೆ ಮುಂದುವರಿದ ದಬ್ಬಾಳಿಕೆ -2013ರ ಆದೇಶಕ್ಕೆ 2025ರಲ್ಲಿ ಎಳ್ಳುನೀರು!
-ಪ್ರಭಾಕರ ಆಯೋಗದ ವರಿದಿಗಿಲ್ಲ ಮಾನ್ಯತೆ -ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಕೊರತೆ ಕಾರಣ -ಕನ್ನಡದಲ್ಲಿ ಬರೆದು ಸಲ್ಲಿಸುವ ಅರ್ಜಿಗಳು ಮೂಲೆಸೇರುವ ಕಾರಣ ಆಂಗ್ಲ ಅಥವಾ ಮಲಯಾಳ ಭಾಷೆಗೆ ಮೊರೆಹೋಗುವ ಅನಿವಾರ್ಯತೆ ಭಾಷಾ ಅಲ್ಪಸಂಖ್ಯಾಕರಿಗೆ


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು…

ಮಂಗಳೂರು ಪೊಲೀಸ್‌ ಕಮಿಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ | ಕಾನೂನು ಎಲ್ಲರಿಗೂ ಒಂದೇ: ಸುಧೀರ್ ಕುಮಾರ್ ರೆಡ್ಡಿ

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ…