ಪುತ್ತೂರು: ಬಾರ್ಯ ಗ್ರಾಮದ ಬನ್ನೆಂಗಳ ನಿಸರ್ಗ ನಿವಾಸಿ, ನಿವೃತ್ತ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ (77) ಇಂದು ಬೆಳಿಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.
ನರಿಮೊಗರು ಶಾಲೆಯ ಮುಖ್ಯಶಿಕ್ಷಕಿಯಾಗಿ ನಿವೃತ್ತರಾದ ಇವರು, ಕೋಡಿಂಬಾಡಿ, ಗೋಳಿತ್ತೊಟ್ಟು, ಬೈಂದೂರಿನ ಉಪ್ಪುಂದ, ಉಪ್ಪಿನಂಗಡಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಇಬ್ಬರು ಸಹೋದರರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.





















