tamanvi
ನಿಧನ

ಮುಕ್ವೆ ದಾಮೋದರ ಆಚಾರ್ಯ ನಿಧನ!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮುಕ್ವೆ ನಿವಾಸಿ ದಾಮೋದರ ಆಚಾರ್ಯ (74 ವ.) ಇಂದು ಮುಂಜಾನೆ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು, ರಾತ್ರಿ ಹೊತ್ತು ಆಸ್ಪತ್ರೆಗೆ ದಾಖಲಿಸಲಾಯಿತು.

ದರ್ಬೆ ಹಾಗೂ ಕೆಮ್ಮಿಂಜೆಯಲ್ಲಿ ಫರ್ನಿಚರ್ ಶಾಪ್ ಹೊಂದಿದ್ದ ಅವರು ಮುಕ್ವೆಯಲ್ಲಿ ವಾಸವಾಗಿದ್ದರು.

ಮೃತರು ಪತ್ನಿ ಲೀಲಾವತಿ, ಪುತ್ರರಾದ ಪ್ರಶಾಂತ್, ಪ್ರವೀಣ್, ಪ್ರದೀಪ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts