Gl
ಅಪರಾಧ

ವಂಚನೆ ಆರೋಪ: ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು!!

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ನ್ಯಾಯಾಲಯ ಸುಮಾರು ಏಳು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ನ್ಯಾಯಾಲಯ ಸುಮಾರು ಏಳು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

akshaya college

ಆರು ದಶಲಕ್ಷ ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮಾ ಗಾಂಧಿ ಮರಿಮೊಮ್ಮಗಳಾದ ಲತಾ ರಾಮ್‌ಗೊಬಿನ್ (56) ಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನ 50 ಸಾವಿರ ರಾಂಡ್ ಮೌಲ್ಯದ ಜಾಮೀನಿನ ಮೇಲೆ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಈಗ ಆರೋಪ ಖಚಿತಗೊಂಡ ಬಳಿಕ ಜೈಲು ಶಿಕ್ಷೆ ಪ್ರಕಟವಾಗಿದೆ.

ಖ್ಯಾತ ಸಾಮಾಜಿಕ ಹಕ್ಕುಗಳ ಕಾರ್ಯಕರ್ತರಾದ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿಂದ್ ಅವರ ಪುತ್ರಿಯೇ ಈ ಲತಾ ರಾಮ್‌ಗೋಬಿನ್. ಅಲ್ಲದೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗಳು ಕೂಡ ಹೌದು.

ಉದ್ಯಮಿ ಎಸ್.ಆರ್. ಮಹಾರಾಜ್ ಎಂಬುವವರಿಗೆ ಸುಮಾರು 3.2 ಕೋಟಿ ರೂ. ವಂಚಿಸಿದ ಹಾಗೂ ಪೋರ್ಜರಿ ಪ್ರಕರಣದಲ್ಲಿ ಲತಾ ಆರೋಪಿಯಾಗಿದ್ದರು. ದಕ್ಷಿಣ ಆಫ್ರಿಕಾದ ಆಸ್ಪತ್ರೆಗಳಿಗೆ ಪೂರೈಸಲು ಮೂರು ಕಂಟೇನರ್ ಲಿನೆನ್ ಖರೀದಿಸಿದ್ದ ಉದ್ಯಮಿ, ಅದಕ್ಕೆ ಮುಂಗಡವನ್ನೂ ಪಾವತಿಸಿದ್ದರು. ಆದರೆ ಸುಂಕ ಮತ್ತಿತರ ವೆಚ್ಚಗಳ ನೆಪದಲ್ಲಿ ಲತಾ ಉದ್ಯಮಿಯಿಂದ ಮತ್ತಷ್ಟು ಹಣ ವಸೂಲಿ ಮಾಡಿದ್ದರು. ಆದರೆ ಸರಕನ್ನೂ ಕೊಡದೆ ಹಣವನ್ನೂ ವಾಪಸ್‌ ಮಾಡಿರಲಿಲ್ಲ. ಬಳಿಕ ನಕಲಿ ಕಾಗದ ಪತ್ರಗಳನ್ನು ಸೃಷ್ಟಿಸಿ ಹೂಡಿಕೆದಾರರ ದಾರಿ ತಪ್ಪಿಸಲು ಯತ್ನಿಸಿದ್ದರು. ಇದೀಗ ಲತಾ ರಾಮ್‌ಗೋಬಿನ್ ಅವರು ನಕಲು ದಾಖಲೆಗಳನ್ನು ಒದಗಿಸಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮಹಾರಾಜ್ ಅವರಿಗೆ 6.2 ಮಿಲಿಯನ್ ಬ್ಯಾಂಡ್‌ ಅಂದರೆ 3,33,59,586 ರೂ. ಹಣವನ್ನು ವಂಚಿಸಿರುವ ಆರೋಪ ಹೊತ್ತಿದ್ದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷ ವಿಧಿಸಲಾಗಿದೆ.

2015 ರಲ್ಲಿ ನ್ಯೂ ಆಫ್ರಿಕಾ ಅಲೈಯನ್ಸ್ ಫೂಟ್‌ವೇ‌ರ್ ಡಿಸ್ಟ್ರಿಬ್ಯುಟರ್ಸ್ ಎಂಬ ಕಂಪನಿಯ ನಿರ್ದೇಶಕ ಮಹಾರಾಜ್ ಅವರು ಆಶಿಶ್ ಲತಾ ರಾಮ್‌ಗೋಬಿನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಕಂಪನಿಯು ಲಿನನ್ ಬಟ್ಟೆ (ಫ್ಯಾಬ್ರಿಕ್) ಹಾಗೂ ಪಾದರಕ್ಷೆಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ಲತಾ ರಾಮ್‌ಗೋಬಿನ್ ಅವರು ಲಿನನ್ ಬಟ್ಟೆಯಿರುವ ಮೂರು ಕಂಟೇನರ್‌ಗಳನ್ನು ಹಡಗಿನ ಮೂಲಕ ಭಾರತದಿಂದ ತರಿಸಿಕೊಡುವುದಾಗಿ ಮಹಾರಾಜ್‌ಗೆ ಭರವಸೆ ನೀಡಿ, ಇದಕ್ಕಾಗಿ ಅವರ ಬಳಿ 3,33,59,586 ರೂ. ಹಣವನ್ನು ಪಡೆದಿದ್ದರು. ನೆಟ್ ಕೇರ್ ಬ್ಯಾಂಕ್‌ ಖಾತೆ ಮೂಲಕ ಈ ಹಣವನ್ನು ಪಾವತಿ ಮಾಡಿರುವುದಾಗಿ ನಕಲಿ ಸಹಿಯುಳ್ಳ ದಾಖಲೆಗಳನ್ನು ತೋರಿಸಿದ್ದರು. ಇದು ನಕಲಿ ದಾಖಲೆಗಳೆಂದು ತಿಳಿದ ಬಳಿಕ ಮಹಾರಾಜ್ ಪ್ರಕರಣ ದಾಖಲಿಸಿದ್ದು, ಲತಾ ರಾಮ್‌ಗೋಬಿನ್ ಅವರನ್ನು ಬಂಧಿಸಲಾಗಿತ್ತು. ಮೊದಲು ಜಾಮೀನಿನ ಮೇಲೆ ಹೊರಬಂದಿದ್ದ ಲತಾ ಇದೀಗ ಜೈಲುಪಾಲಾಗಿದ್ದಾರೆ.

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಗಾಂಧೀಜಿಯ ಹಲವಾರು ವಂಶಸ್ಥರು ಇಂದಿಗೂ ಸಮಾಜಸ ಒಳಿತಿಗಿಗಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಆದರೆ ಲತಾ ರಾಮ್‌ಗೋಬಿನ್ ಮಾತ್ರ ಅಪರಾಧಿಯಾಗಿ ತಮ್ಮ ಕುಟುಂಬದ ಗೌರವಕ್ಕೆ ಮಸಿ ಬಳಿದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರು!!

ಕಣ್ಣೂರು: ಕೊಟ್ಟಿಯೂರಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ…