Gl jewellers
ಪ್ರಚಲಿತಸ್ಥಳೀಯ

ಮಂಜಲ್ಪಡ್ಪು ಅಂಗನವಾಡಿ ಕೇಂದ್ರಕ್ಕೆ ರೂಫ್ ಶೀಟ್ ಅಳವಡಿಕೆಯ ಕೊಡುಗೆ | ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಶಾಶ್ವತ ಯೋಜನೆ

Karpady sri subhramanya
ಮಂಜಲ್ಪಡ್ಪು ಅಂಗನವಾಡಿ ಕೇಂದ್ರಕ್ಕೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ 2024-25ನೇ ಸಾಲಿನಲ್ಲಿ ಕೊಡುಗೆಯಾಗಿ ನೀಡಿದ ರೂಫ್ ಶೀಟ್ ಅಳವಡಿಕೆ ಶಾಶ್ವತ ಯೋಜನೆಯ ಉದ್ಘಾಟನೆ ಜ. 30ರಂದು ಅಂಗನವಾಡಿ ಆವರಣದಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಪುತ್ತೂರು: ಮಂಜಲ್ಪಡ್ಪು ಅಂಗನವಾಡಿ ಕೇಂದ್ರಕ್ಕೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ 2024-25ನೇ ಸಾಲಿನಲ್ಲಿ ಕೊಡುಗೆಯಾಗಿ ನೀಡಿದ ರೂಫ್ ಶೀಟ್ ಅಳವಡಿಕೆ ಶಾಶ್ವತ ಯೋಜನೆಯ ಉದ್ಘಾಟನೆ ಜ. 30ರಂದು ಅಂಗನವಾಡಿ ಆವರಣದಲ್ಲಿ ನಡೆಯಿತು.

ಶಾಶ್ವತ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ಡಾ. ಶ್ರೀಪತಿ ರಾವ್, 5 ವರ್ಷದ ಬೆಳವಣಿಗೆಯಲ್ಲಿ ಮಕ್ಕಳ ಮೆದುಳು ಉತ್ತಮ ಬೆಳವಣಿಗೆಯಾಗುತ್ತದೆ. ಈ ಹೊತ್ತಿನಲ್ಲಿ ಅಂಗನವಾಡಿ ಕೇಂದ್ರದ ಕೆಲಸ ಶ್ಲಾಘನೀಯ. ಇಂತಹ ಅಂಗನವಾಡಿ ಮುಂಭಾಗ ಶೀಟ್ ಅಳವಡಿಸುವ ಕಾರ್ಯ ನೆರವೇರಿಸಿದ ರೋಟರ್ಯಾಕ್ಟ್ ಕಾರ್ಯ ಅಭಿನಂದನೀಯ ಎಂದರು.

Sampya jathre

ಯೂತ್ ಸರ್ವೀಸ್ ಡೈರೆಕ್ಟರ್ ಪ್ರೀತಾ ಹೆಗ್ಡೆ ಮಾತನಾಡಿ, ಇದೊಂದು ಉತ್ತಮ ಕಾರ್ಯ. ಈ ಯೋಜನೆ ಮೂಲಕ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನ‌ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ಸರ್ವ ಸದಸ್ಯರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಈ ಶಾಶ್ವತ ಯೋಜನೆ ನಿರ್ಮಿಸಲಾಗಿದೆ ಎಂದರು.

ಸಭಾಪತಿ ಶ್ರೀಧರ್ ಕೆ., ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಅಣ್ಷಪ್ಪ ಕಾರೆಕ್ಕಾಡು, ನಗರಸಭೆ ಸದಸ್ಯ ದಿನೇಶ್, ಝಡ್.ಆರ್.ಆರ್. ನವೀನ್ ರೈ ಬನ್ನೂರು, ಪುತ್ತೂರು ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್ ಉಪಸ್ಥಿತರಿದ್ದರು.

ಕಿಶೋರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆ ಕುಸುಮಾ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ವಿನೀತ್ ವಂದಿಸಿ, ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಾವಿಗೆ ಬಿದ್ದ ಬೆಕ್ಕಿನಿಂದ ಅಟ್ಯಾಕ್!! ಪುತ್ತೂರಿನ ತೆಂಕಿಲದಲ್ಲಿ ರಕ್ಷಣೆಗೆ ಮುಂದಾದವರ ಮೇಲೆಯೇ ತಿರುಗಿ ಬಿದ್ದ ಬೆಕ್ಕು!!

ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ…

12ರಲ್ಲಿ 12 ಸೀಟುಗಳನ್ನು ಬಾಚಿದ ಸಹಕಾರ ಭಾರತಿ|ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ರಂಗೇರಿದ ಕದನದಲ್ಲಿ ಜಯ ಸಾಧಿಸಿದ ಬಿಜೆಪಿ

ರಂಗೇರಿದ ಚುನಾವಣಾ ಆಖಾಡದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 12 ಸದಸ್ಯರು ಪುತ್ತೂರು…