ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸನಲ್ಲಿ ನವೆಂಬರ್ 08ರಿಂದ ಕರಿಮಣಿ ಮೇಳ ಆರಂಭಗೊಂಡಿದ್ದು, ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿದೆ.
ಸ್ಥಳೀಯವಾಗಿ ಕರಿಮಣಿ ಸರ ಎಂದು ಕರೆಯಲ್ಪಡುವ ಮಂಗಳಸೂತ್ರವು ಪ್ರತಿಯೊಂದು ವಿವಾಹಿತ ಮಹಿಳೆಯರು ದಾಂಪತ್ಯದ ಶಾಶ್ವತ ಬಂಧವನ್ನು ಸಂಕೇತಿಸಲು ಧರಿಸುವ ಹಾರವಾಗಿದೆ. ಈ ಸರಳವಾದ ಹಾರವು ಹಲವಾರು ದಶಕಗಳಿಂದ ಹಲವಾರು ರೂಪಗಳನ್ನು ಪಡೆದುಕೊಂಡಿದೆ. ಆದರೆ ಅದರ ಸಂಪ್ರದಾಯಗಳು ಮತ್ತು ಪ್ರಸ್ತುತತೆ ಒಂದೇ ಆಗಿವೆ.ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ನವೆಂಬರ್ 08ರಿಂದ ಕರಿಮಣಿ ಮೇಳವನ್ನು ಆಯೋಜಿಸಿದ್ದು ಈ ಪ್ರಯುಕ್ತ ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಹಳೇ ಚಿನ್ನಕ್ಕೆ ಪ್ರತೀ ಗ್ರಾಂಗೆ ರೂ. 100/-ಅಧಿಕ ದರ ಪಡೆಯಬಹುದು. ನಮ್ಮಲ್ಲಿ ಸುಮಾರು 1500ಕ್ಕೂ ಮಿಕ್ಕಿದ ಕರಿಮಣಿ ಸರಗಳ ವಿನೂತನ ಕಲೆಕ್ಷನ್ಗಳು ಹಾಗೂ ಉಡುಗೊರೆಗಳೊಂದಿಗೆ ಗ್ರಾಹಕರ ಆಯ್ಕೆಗೆ ತಕ್ಕಂತೆ ಲಭ್ಯವಿರುತ್ತದೆ.
1957ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ನಯದೊಂದೊಗೆ ಈ ಕೊಡುಗೆ ತಮ್ಮ ಎಲ್ಲ ಮಳಿಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.























