Gl
ಕರಾವಳಿಸ್ಥಳೀಯ

ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ! ಆಸ್ಪತ್ರೆ ಒಳಾಂಗಣಕ್ಕೆ ಆ್ಯಂಬುಲೆನ್ಸ್ ರೀತಿ ನುಗ್ಗಿದ ಬಸ್: ಚಾಲಕ – ನಿರ್ವಾಹಕರಿಗೆ ಶ್ಲಾಘನೆಯ ಮಹಾಪೂರ

ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಬಸ್ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕ್ ಸೂಚನೆ ದೊರಕಿದ ತಕ್ಷಣ, ಬಸ್ ನೇರವಾಗಿ ಆಸ್ಪತ್ರೆ ಒಳಾಂಗಣಕ್ಕೆ ನುಗ್ಗಿ ಚಿಕಿತ್ಸೆ ಕೊಡಿಸಿದ ಘಟನೆ ಮಂಗಳೂರಿನಲ್ಲಿ ನಡೆಯಿತು.

Pashupathi
13 F ರೂಟಿನ ಕೃಷ್ಣ ಪ್ರಸಾದ್ ಬಸ್ ಕೂಳೂರು ಮಾರ್ಗವಾಗಿ ಸಂಚರಿಸುತ್ತಿತ್ತು. ಇದ್ದಕ್ಕಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಹಾರ್ಟ್ ಅಟ್ಯಾಕಿನ ಸೂಚನೆ ಸಿಕ್ಕಿತು.
ತಕ್ಷಣವೇ ಬಸ್ ಆ್ಯಂಬುಲೆನ್ಸ್ ಅಗಿ ಬದಲಾಯಿತು. ಸುಮಾರು ಆರು ಕಿಲೋ ಮೀಟರ್ ದೂರವನ್ನು ಕೇವಲ ಆರು ನಿಮಿಷದಲ್ಲಿ ಬಸ್ ಕ್ರಮಿಸಿತು. ನೇರವಾಗಿ ಕಂಕನಾಡಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ಬಸ್, ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ತುರ್ತು ಸಂದರ್ಭ ಮತ್ತೊಂದು ಆಲೋಚಿಸದೇ, ಆಸ್ಪತ್ರೆಯ ಅಪ್ಪಣೆಗೆ ಕಾಯದೇ ಮುಂದುವರಿದ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದ‌ರ್ ಹಾಗೂ ಮಹೇಶ್ ಪೂಜಾರಿ, ಸುರೇಶ್ ಅವರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ಮಂಗಳೂರು ಕಮೀಷನರ್, ಎಸ್ಪಿ ಅವರಿಂದ ಶ್ಲಾಘನೀಯ ಕೆಲಸ!  ಶಾಂತಿ ಸ್ಥಾಪನೆಗೆ ಗಡಿಪಾರು ಉತ್ತಮ ಕಾರ್ಯ: ಕಾಂಗ್ರೆಸ್

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು…

1 of 113