tamanvi
ಧಾರ್ಮಿಕ

ಪುತ್ತೂರು:ಧೀಶಕ್ತಿ ಮಹಿಳಾ ಯಕ್ಷಬಳಗ ಇವರಿಂದ ಶ್ರೀಮತಿ ಪರಿಣಯ ತಾಳಮದ್ದಳೆ

D_shiva_bhat
 ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರ ಉದಯಗಿರಿ, ಸಂಪ್ಯದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ  ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ  ಶೇಣಿ ಗೋಪಾಲಕೃಷ್ಣ ಭಟ್ ವಿರಚಿತ " ಶ್ರೀಮತಿ ಪರಿಣಯ " ಯಕ್ಷಗಾನ ತಾಳಮದ್ದಳೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರ ಉದಯಗಿರಿ, ಸಂಪ್ಯದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ  ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ  ಶೇಣಿ ಗೋಪಾಲಕೃಷ್ಣ ಭಟ್ ವಿರಚಿತ ” ಶ್ರೀಮತಿ ಪರಿಣಯ ” ಯಕ್ಷಗಾನ ತಾಳಮದ್ದಳೆ ನಡೆಯಿತು.  ಹಿಮ್ಮೇಳದಲ್ಲಿ ಭಾಗವತರಾಗಿ  ರಚನಾ ಚಿದ್ಗಲ್ ,ಮದ್ದಳೆಯಲ್ಲಿ ಶ್ರೀ ಲಕ್ಷ್ಮೀಶ ಶಗ್ರಿತ್ತಾಯ, ಚೆಂಡೆಯಲ್ಲಿ,  ಮಾ ಅದ್ವೈತ ಕನ್ಯಾನ ,  ಚಕ್ರತಾಳದಲ್ಲಿ| ಚೈತಾಲಿ,ಕಾಂಚೋಡು ಸಹಕರಿಸಿದ್ದರು.  ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ (ನಾರದ),ಜಯಲಕ್ಷ್ಮಿ ವಿ ಭಟ್ ( ಅಂಬರೀಷ),  ಶಾಲಿನಿ ಅರುಣ್ ಶೆಟ್ಟಿ (ಪರ್ವತ),  ಶುಭಾ ಪಿ ಆಚಾರ್ಯ( ಮಹಾರಾಣಿ),  ವೈಷ್ಣವಿ ಜೆ ರಾವ್ (ಮಹಾವಿಷ್ಣು),ಅಭಿಜ್ಞಾ ರಾವ್ ದಾಳಿಂಬ ಭಾಗವಹಿಸಿದ್ದರು.  ದೇವಸ್ಥಾನದ  ಬ್ರಹ್ಮಕಲಶೋತ್ಸವ ಸಮಿತಿಯ ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮ ನಿರೂಪಿಸಿದರು.  ಸಂಘದ ನಿರ್ದೇಶಕರಾದ ಪದ್ಮಾ ಕೆ ಆರ್ ಆಚಾರ್ಯ ಪಾತ್ರ ಪರಿಚಯ ಮಾಡಿ, ವಂದಿಸಿದರು.

maithri

ಕಾರ್ಯಕ್ರಮದ ಕೊನೆಯಲ್ಲಿ ದೇವಳದ ಅರ್ಚಕರು ಕಲಾವಿದರಿಗೆ ದೇವರ ಪ್ರಸಾದವನ್ನು ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…