ಪುತ್ತೂರು: ಎರಡನೇ ಬಾರಿಗೆ ಪುತ್ತೂರಿನಲ್ಲಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರೀನಿವಾಸ, ಶ್ರೀದೇವಿ, ಭೂದೇವಿಯ ವೈಭವದ ಮೆರವಣಿಗೆ ಪುತ್ತೂರು ಪೇಟೆಯಲ್ಲಿ ಸಾಗಿಬಂತು.

ಪುತ್ತೂರು ಪೇಟೆಯಾದ್ಯಂತ ಬೆಳಕಿನ ವೈಭವ ಹರಡಿದ್ದು, ಬೆಳಕಿನ ನಡುವೆ ಶ್ರೀ ದೇವರ ಮೆರವಣಿಗೆಯ ಶೋಭೆ ಎದ್ದು ಕಾಣುತ್ತಿತ್ತು.
ಅಲಂಕೃತ ವಾಹನದಲ್ಲಿ ದೇವರ ಮೂರ್ತಿಯ ಜೊತೆಗೆ ಸ್ವಾಮೀಜಿಯವರು ಉಪಸ್ಥಿತರಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಭಾಂಗಣಕ್ಕೆ ಮೆರವಣಿಗೆ ಆಗಮಿಸಿ, ದೇವರನ್ನು ವೇದಿಕೆಗೆ ಕರೆತರಲಾಯಿತು.



