ಧಾರ್ಮಿಕ

ನಾಳೆ ಕಿಲ್ಲೆ ಮೈದಾನದಲ್ಲಿ ಬಾಲಗಣಪತಿ ಹೋಮ | ಬೆಳಿಗ್ಗೆ 11ರಿಂದ ನಿರಂತರವಾಗಿ ನಡೆಯಲಿದೆ ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯಮಯ ನಾಟಕ ಪ್ರದರ್ಶನ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ದೇವತಾ ಸಮಿತಿ ನೇತೃತ್ವದಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ 68ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಆ. 31ರ ಭಾನುವಾರ ಮುಂಜಾನೆ 4.45ರಿಂದ ಬಾಲಗಣಪತಿ ಹೋಮ ನಡೆಯಲಿದೆ.

chennai-shopping
maithri

ಬಾಲಗಣಪತಿ ಹೋಮವು ಗಣಪತಿಯ ಬಾಲರೂಪದ ಉಪಾಸನೆ. ಲೋಕಕಲ್ಯಾಣಾರ್ಥದ ಉದ್ದೇಶದೊಂದಿಗೆ ವೈಯಕ್ತಿಕವಾಗಿ ಸುಖ ಸಮೃದ್ಧಿ ನೀಡುತ್ತದೆ. ಮನಸ್ಸನ್ನು ಉದ್ವೇಗ ಮುಕ್ತಗೊಳಿಸಿ ಜೀವನದಲ್ಲಿ ಎದುರಾಗುವ ಅಡೆತಡೆಗಳು, ನಕಾರಾತ್ಮಕ ಶಕ್ತಿಗಳ ಸಮಸ್ಯೆಗಳು, ಮಕ್ಕಳಿಗೆ ಎದುರಾಗುವ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಹೋಮವು ಮುಂಜಾನೆ 4.45ರಿಂದ ಆರಂಭವಾಗಿ ಸೂರ್ಯೋದಯದ ಮೊದಲು ಪೂರ್ಣಾಹುತಿ ಆಗುತ್ತದೆ.

ಬೆಳಿಗ್ಗೆ 11ಕ್ಕೆ ವಿಶ್ವಗುರು ಭರತನಾಟ್ಯ ಕಲಾಶಾಲೆಯ ವಿದುಷಿ ಭಾಗ್ಯಶ್ರೀ ರೈ ಮತ್ತು ಬಳಗದಿಂದ ಭರತನಾಟ್ಯ, ಮಧ್ಯಾಹ್ನ 12ರಿಂದ ಪುತ್ತೂರು ಪಾಂಚಜನ್ಯ ಯಕ್ಷಕಲಾ ಸಂಘದ ಮಕ್ಕಳ ಮೇಳದಿಂದ ಯಕ್ಷಗಾನ, 2 ಗಂಟೆಯಿಂದ ಉಪ್ಪಿನಂಗಡಿ ಸುಸ್ವರ ಮೆಲೋಡೀಸ್ ತಂಡದಿಂದ ಭಕ್ತಿ ರಸಮಂಜರಿ, 3 ಗಂಟೆಯಿಂದ ಪುತ್ತೂರು ತುಳು ಅಪ್ಪೆ ಕೂಟದಿಂದ ತುಳುನಾಡ ಬಲಿಯೇಂದ್ರ ತುಳು ಯಕ್ಷಗಾನ ತಾಳಮದ್ದಳೆ ಜರುಗಲಿದೆ.

ಸಂಜೆ 5.30ರಿಂದ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲದಿಂದ ಸಾಂಸ್ಕೃತಿಕ ವೈವಿಧ್ಯ, 6.30ರಿಂದ ಪುತ್ತೂರು ಮಧುಮಿತಾ ತಂಡದಿಂದ ವೀಣಾವಾದನ, ರಾತ್ರಿ 8ರಿಂದ ಅಮ್ಮ ಕಲಾವಿದೆರ್ ಕುಡ್ಲ, ಸುಂದರ ರೈ ಮಂದಾರ, ದೀಪಕ್ ರೈ ಸಾರಥ್ಯದಲ್ಲಿ ಆನ್ ಮನೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಜಾತ್ರೆಗೆ ಮೆಸ್ಕಾಂ ಮುಂಜಾಗ್ರತೆ!! ದೇವರ ಪೇಟೆ ಸವಾರಿಯ ರಸ್ತೆಗಳಲ್ಲಿ ವಿದ್ಯುತ್ ಸುರಕ್ಷತಾ ಕಾರ್ಯ

ಪುತ್ತೂರು: ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವಾರಿ ಸೇರಿದಂತೆ ಜನಸಂದಣಿ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ದೇವಸ್ಥಾನಕ್ಕೆ ಅಕ್ಕಿ, ಸಾಮಗ್ರಿ ಸಮರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ದೇವಸ್ಥಾನದ…

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…

ಡಿ. 7, 8: ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ ಶಾರದಾಂಬ ಭಜನಾ ಮಂದಿರದ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ, ಅಯ್ಯಪ್ಪ ದೀಪೋತ್ಸವ

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ-ಶಾರದಾಂಭ…