ಪುತ್ತೂರು: ಶ್ರೀ ರಾಮ ನವಮಿಯ ಪ್ರಯುಕ್ತ
ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು ಪುತ್ತೂರು ಇದರ ವತಿಯಿಂದ ಕಾಸರಗೋಡು ಸಮೀಪದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಇರುವ ಶ್ರೀ ಮಹಾಬಲ ಶೆಟ್ಟಿ ಇವರ ಮನೆ ಶ್ರೀ ರಾಮ ಧಾಮದಲ್ಲಿ ಏ. 6ರಂದು ತಾಳಮದ್ದಳೆ ನಡೆಯಿತು.
ಗಣೇಶ್ ಕೊಲೆಕ್ಕಾಡಿ ವಿರಚಿತ ಸಮರ ಸೌಗಂಧಿಕಾ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಮುರಳೀ ಮಾಧವ ಮಧೂರು ಗೋಪಾಲಕೃಷ್ಣ ಮಧೂರು ಸಹಕರಿಸಿದರು.
ಮುಮ್ಮೇಳದಲ್ಲಿ, ಶುಭಾ ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ),ಹರಿಣಾಕ್ಷಿ ಜೆ ಶೆಟ್ಟಿ(ಹನೂಮಂತ), ಶುಭಾ ಗಣೇಶ್(ಕುಬೇರ), ಸಹಕರಿಸಿದರು.
ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿದಾಸ
ಶ್ರೀ ಮಹಾಬಲ ಶೆಟ್ಟಿ ಕೂಡ್ಲು ವಂದಿಸಿದರು. ಕೂಡ್ಲು ಕುಟುಂಬಸ್ಥರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.