ಕರಾವಳಿ

ಸ.ಹಿ‌.ಪ್ರಾ ಶಾಲೆ ಸಜಂಕಾಡಿಯಲ್ಲಿ “ನಮ್ಮ ನಡಿಗೆ ನಾಟಿ ವೈದ್ಯರ ಮನೆಯ ಕಡೆಗೆ ” ಕಾರ್ಯಕ್ರಮ 

ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  'ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ "ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿ

ಈ ಸುದ್ದಿಯನ್ನು ಶೇರ್ ಮಾಡಿ

ದ.ಕ. ಜಿ. ಪಂ ಹಿ ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳಿಗೆ ಪರಂಪರಾಗತ ನಾಟಿ ವೈದ್ಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ  ‘ನಮ್ಮ ನಡಿಗೆ  ನಾಟಿ ವೈದ್ಯರ ಮನೆಯ ಕಡೆಗೆ “ಎಂಬ ವಿಭಿನ್ನ  ಕಾರ್ಯಕ್ರಮವು ಪಡುಮಲೆ ಪೂಜಾರಿ ಮೂಲೆಯ ವಿಶ್ವನಾಥ ಪೂಜಾರಿಯವರ ಮನೆಯಂಗಳದಲ್ಲಿ ನಡೆಯಿತು .ಕೆಂಪು ,ಸರ್ಪಸುತ್ತು ,ಪಕ್ಷವಾತ ,ಅಂಗವಿಕಲರಿಗೆ ಮದ್ದು ,ಕಿಡ್ನಿಸ್ಟೋನ್ ಮುಂತಾದ  ರೋಗಗಳಿಗೆ ಸುಮಾರು 40ವರುಷಗಳಿಂದ ಪರಂಪರೆಯಿಂದ ಬಂದಹ ನಾಟಿ ಔಷಧಿ ನೀಡುತ್ತಿರುವ  ವಿಶ್ವನಾಥ ಪೂಜಾರಿಯವರು  ವಿವಿಧ ಗಿಡಮೂಲಿಕೆಗಳೊಂದಿಗೆ ಮಾಹಿತಿ ನೀಡಿದರು .ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ  ಶ್ರೀಮತಿ ಯಶೋಧ ಅಧ್ಯಕ್ಷತೆ ವಹಿಸಿದ್ದರು . ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ರಝಾಕ್ , ಹಿರಿಯ ಶಿಕ್ಷಕಿ ಶಶಿಕಲಾ ,ಪೋಷಕರಾದ ಬಾಬು,ಅಡುಗೆ ಸಿಬ್ಬಂದಿ ಗಳಾದ ಸ್ಟೆಲ್ಲಾ ಮತ್ತು ಸೀತಾ  ಉಪಸ್ಥಿತರಿದ್ದರು .

ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಪ್ರಾಸ್ಥಾವಿಕ ಮಾತುಗಳನ್ನಾಡಿದರು .ಶಿಕ್ಷಕ  ಗಣೇಶ ನಾಯಕ್ ಪುತ್ತೂರು ಕಾರ್ಯನಿರೂಪಿಸಿದರು .

ಸನ್ಮಾನ : ಸುಮಾರು ನಲುವತ್ತು ವರುಷಗಳಿಂದ ವಿವಿಧ ರೋಗಗಳಿಗೆ ಪರಂಪರಾಗತ ನಾಟಿ ಔಷಧಿ ನೀಡುತ್ತಿರುವ ವಿಶ್ವನಾಥ ಪೂಜಾರಿಯವರನ್ನು ಸನ್ಮಾನಿಸಲಾಯಿತು .


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದೇಹದಂತೆ ದೇಶ, ದೇವರ ರಕ್ಷಣೆ ಅಗತ್ಯ | ಪುತ್ತೂರಿನಲ್ಲಿ ಶೋಭಾಯಾತ್ರೆ ಬಳಿಕ ನಡೆದ ಹಿಂದೂ ಸಂಗಮದಲ್ಲಿ ಕಣಿಯೂರು ಶ್ರೀ

ಪುತ್ತೂರು: ದೇಹವನ್ನು ದಿನನಿತ್ಯ ರಕ್ಷಣೆ ಮಾಡುವಂತೆ ದೇಶ ಹಾಗೂ ದೇವಸ್ಥಾನವನ್ನು ರಕ್ಷಣೆ…