ಮಂಗಳೂರು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ಬೋಟ್ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆ ಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಲಿಪ್ ಪಾರ್ತೊಲೋಮಿಯಾ (56) ಎಂಬವರು ಅ.22ರಂದು ರಾತ್ರಿ 11ಕ್ಕೆ ಇತರ 10 ಮಂದಿಯೊಂದಿಗೆ ನಗರದ ಬಂದರಿನ ಬೋಟ್ನಲ್ಲಿ ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದರು. ಅ.25ರಂದು ರಾತ್ರಿ 11ಕ್ಕೆ ಮೀನು ಹಿಡಿಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ಬೋಟ್ನಿಂದ ಆಳ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ.
ಅವರನ್ನು ಕಾಪಾಡುವ, ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದಾಗಿ ಬೋಟ್ನ ಚಾಲಕ ತಿಳಿಸಿರುವುದಾಗಿ ಪಿಲಿಪ್ ಪಾರ್ತೊಲೋಮಿಯಾರ ಪುತ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

























