ಮಣಿಪಾಲ: ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ವಸತಿ ನಿಲಯದಿಂದ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನ ಮೂಲದ ಸಿದ್ದಾರ್ಥ ಕಾರ್ವಾಲ್ (23) ನಾಪತ್ತೆಯಾದವರು. ಅವರ ತಂದೆ ಜೀತೇಂದ್ರ ಕುಮಾರ್ ಅವರು ರಾಜಸ್ಥಾನದಿಂದ ಮಗನನ್ನು ನೋಡಲು ಜು. 7ರ ಬೆಳಗ್ಗೆ 8 ಗಂಟೆಗೆ ಹಾಸ್ಟೆಲ್ಗೆ ಬಂದಿದ್ದರು. ಆದರೆ ಆತನ ಕೊಠಡಿಯಲ್ಲಿ ಬಟ್ಟೆ ಹಾಗೂ ಮೊಬೈಲ್ ಮಾತ್ರವೇ ಇತ್ತು. ಈ ಬಗ್ಗೆ ಮೇಲ್ವಿಚಾರಕರಲ್ಲಿ ಕೇಳಿದಾಗ ಅವರು ಜು. 6ರ ರಾತ್ರಿ 10.30ಕ್ಕೆ ಸಿದ್ದಾರ್ಥ ಹಾಸ್ಟೆಲ್ನಿಂದ ಹೋಗಿರುವುದಾಗಿ ತಿಳಿಸಿದರು. ವಿದ್ಯಾರ್ಥಿಯು ಹಾಸ್ಟೆಲ್ ಗೂ ಬಾರದೆ, ಮನೆಗೂ ಹೋಗದೇ ನಾಪತ್ತೆಯಾಗಿರುವುದಾಗಿದೆ ದೂರಿನಲ್ಲಿ ತಿಳಿಸಲಾಗಿದೆ.