Gl
ಅಪರಾಧ

ಒಂದು‌ ದಿನದ ಮಗುವಿನ ಕಳ್ಳತನ ಮಾಡಿದ ಮಹಿಳೆ!

ಜಿಲ್ಲಾಸ್ಪತ್ರೆಯಲ್ಲಿ ಓರ್ವ ಮಹಿಳೆ ಒಂದು ದಿನದ ಹೆಣ್ಣು ಮಗುವೊಂದನ್ನು (child) ಕಳ್ಳತನ ಮಾಡಿದ್ದ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಜಿಲ್ಲಾಸ್ಪತ್ರೆಯಲ್ಲಿ ಓರ್ವ ಮಹಿಳೆ ಒಂದು ದಿನದ ಹೆಣ್ಣು ಮಗುವೊಂದನ್ನು (child) ಕಳ್ಳತನ ಮಾಡಿದ್ದ ಘಟನೆ ನಡೆದಿದೆ.

Pashupathi

ರಾಮದುರ್ಗ ತಾಲ್ಲೂಕಿನ ಖಾನಪೇಟೆ ನಿವಾಸಿ ಸಾಕ್ಷಿ ಯಾದವಾಡ (24) ಮಗು ಕದ್ದ ಮಹಿಳೆ.

akshaya college

ಸದ್ಯ ಮಗುವಿನ ರಕ್ಷಣೆ ಮಾಡಲಾಗಿದೆ. 2024 ರಿಂದಲೇ ಮಗು ಕದಿಯಲು ಪ್ಲಾನ್ ಮಾಡಿದ್ದು, ಸಾಕ್ಷಿಗೆ ಆಕೆಯ ತಾಯಿ, ಸಹೋದರಿಯರು ಸೇರಿ ಮೂವರು ಸಾಥ್ ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಬಾಗಲಕೋಟೆ ನವನಗರ ಪೊಲೀಸರು ಬಂಧಿಸಿದ್ದಾರೆ.

ಸಾಕ್ಷಿ ಯಾದವಾಡ, ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆಗೆ ಬಂದು ಅನುಮತಿ ಪಡೆಯದೇ ಹೆರಿಗೆ ವಾರ್ಡ್‌ನಲ್ಲಿ ಸೇರಿಕೊಂಡಿದ್ದರು. ಅಕ್ಕಪಕ್ಕದವರಿಗೆ ನನಗೂ ಮಗು ಆಗಿದೆ ಎಂದು ಇಂದು ಬೆಳಿಗ್ಗೆ 4.30 ಗಂಟೆಗೆ ನರ್ಸ್‌ ಅಂತ ಹೇಳಿ ಕಫ ತೆಗೆಸುವುದಾಗಿ ಬೇರೆಯವರ ಮಗುವನ್ನು ತೆಗೆದುಕೊಂಡು ಹೋಗಿ ತಮ್ಮ ಬಳಿ ಮಲಗಿಸಿಕೊಂಡಿದ್ದಾರೆ.

ಸಾಕ್ಷಿ ಯಾದವಾಡ ಜಿಲ್ಲೆಯ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ತಾಯಿ ಕಾರ್ಡ್ ಮಾಡಿಸಿದ್ದಾರೆ. ಆ ಮೂಲಕ ತನ್ನ ಅನುಕೂಲಕ್ಕೆ ತಕ್ಕಂತೆ ದಿನಾಂಕ ತಿದ್ದುಪಡಿ ಮಾಡುತ್ತಿದ್ದರು. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 2024ರಲ್ಲೇ ಸಾಕ್ಷಿ ಒಟ್ಟು ಮೂರು ಬಾರಿ ಒಪಿಡಿ ಮಾಡಿಸಿ ಚಿಕಿತ್ಸೆ ಪಡೆಯದೆ ಹೋಗಿದ್ದರು. ಒಂದು ಬಾರಿ ಗರ್ಭದ ಬಗ್ಗೆ ಸ್ಕ್ಯಾನಿಂಗ್‌ ಮಾಡಿಸಿದ್ದು, ಅದರಲ್ಲಿ ನೆಗೆಟಿವ್ ಬಂದಿತ್ತು.

ಜಿಲ್ಲಾಸ್ಪತ್ರೆಯ ಪಕ್ಕದ ವಾರ್ಡ್‌ನಲ್ಲೇ ಇದ್ದ ಸಾಕ್ಷಿ ಯಾದವಾಡ ಬಳಿ ಮಗು ಪತ್ತೆ ಆಗಿದೆ. ಸಂಶಯ ಬಂದು ಮಹಿಳೆಗೆ ವೈದ್ಯರಿಂದ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ಮಹಿಳೆಗೆ ಹೆರಿಗೆ ಆಗಿಲ್ಲ ಎಂಬುದು ದೃಢವಾಗಿದೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಗು ಹೇಗೆ ನಿಮ್ಮ ಬಳಿ ಬಂತು ಎಂದು ವಾರ್ಡ್‌ನಲ್ಲೇ DySP ಮಹಾಂತೇಶ್ ಜಿದ್ದಿ ಮತ್ತು ಸಿಪಿಐ ಬಿರಾದಾರರಿಂದ ಮಹಿಳೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಮಗು ನನ್ನದೇ ಎಂದು ಮಹಿಳೆ ವಾದ ಮಾಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಜಿಲ್ಲಾಸ್ಪತ್ರೆ ಸರ್ಜನ್ ಮಹೇಶ್ ಕೋಣಿ, ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಿಸುತ್ತೇವೆ. ಆಸ್ಪತ್ರೆಯಲ್ಲಿ ಸಂಬಂಧಪಟ್ಟ ವಾರ್ಡ್‌ನಲ್ಲಿ ನಿರ್ಲಕ್ಷ್ಯ ಬಗ್ಗೆಯೂ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಗೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನರ್ಸ್ ಅಂತ ಹೇಳಿ ಕಫ ತೆಗೆಸುವುದಾಗಿ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಜಿಲ್ಲಾಸ್ಪತ್ರೆ ಕ್ಯಾಮೆರಾ ಹಾಗೂ ನಗರದಲ್ಲಿ ನಾವು ಅಳವಡಿಸಿರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತೇವೆ ಎಂದಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊಟ್ಟಿಯೂರು: ಭಾರೀ ಜನಸಂದಣಿ, 10 ನಿಮಿಷದ ಹಾದಿಗೆ 3.30 ತಾಸು!! ಮಗು ಸಾವು; ಹೊಳೆ ನೀರಲ್ಲಿ ಕೊಚ್ಚಿ ಹೋದ ತರುಣರು!!

ಕಣ್ಣೂರು: ಕೊಟ್ಟಿಯೂರಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ…