pashupathi
ಅಪರಾಧ

ಜೆಸಿಬಿಗೆ ತಲೆಕೆಳಕಾಗಿ ಕಟ್ಟಿ ಹಾಕಿ ಬೆಲ್ಟಿಂದ ಹಲ್ಲೆ; ಗಾಯಕ್ಕೆ ಉಪ್ಪು ಸವರಿ ಚಿತ್ರಹಿಂಸೆ!!

tv clinic
ಸ್ಥಳೀಯ ರೌಡಿಶೀಟರ್ ಒಬ್ಬ ತನ್ನದೇ ಡ್ರೈವರ್‌ನನ್ನು ಜೆಸಿಬಿ ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ, ಬೆಲ್ಟಿಂದ ಅಮಾನವೀಯವಾಗಿ ಥಳಿಸಿದ ಘಟನೆಯ ಫೊಟೋ, ವೀಡಿಯೋ ಇದೀಗ ವೈರಲ್ ಆಗಿದೆ‌.

ಈ ಸುದ್ದಿಯನ್ನು ಶೇರ್ ಮಾಡಿ

ಸ್ಥಳೀಯ ರೌಡಿಶೀಟರ್ ಒಬ್ಬ ತನ್ನದೇ ಡ್ರೈವರ್‌ನನ್ನು ಜೆಸಿಬಿ ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ, ಬೆಲ್ಟಿಂದ ಅಮಾನವೀಯವಾಗಿ ಥಳಿಸಿದ ಘಟನೆಯ ಫೊಟೋ, ವೀಡಿಯೋ ಇದೀಗ ವೈರಲ್ ಆಗಿದೆ‌.

akshaya college

ರಾಜಸ್ಥಾನದ ನೂತನ ಬೇವಾರ್ ಜಿಲ್ಲೆಯ ರಾಯಪು‌ರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ, ರೌಡಿಶೀಟ‌ರ್ ತೇಜ್‌ಪಾಲ್ ಸಿಂಗ್‌ ಉದಾವತ್ ಎಂಬಾತ ತನ್ನ ಚಾಲಕನನ್ನು ಜೆಸಿಬಿ ಯಂತ್ರದ ಹುಕ್‌ಗೆ ಕಾಲುಗಳನ್ನು ಕಟ್ಟಿ ತಲೆಕೆಳಗಾಗಿ ನೇತುಹಾಕಿದ್ದಾನೆ. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಗಾಯಗಳ ಮೇಲೆ ಉಪ್ಪು ಹಚ್ಚಿ ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ನಡೆಯುವಾಗ ಫಾರ್ಮ್‌ಹೌಸ್‌ನಲ್ಲಿ ಹಲವು ಜನ ಸೇರಿದ್ದರೂ, ರೌಡಿಶೀಟರ್‌ಗೆ ಭಯಪಟ್ಟು ಯಾರೂ ಚಾಲಕನನ್ನು ರಕ್ಷಿಸಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ.

ಗುಡಿಯಾ ಗ್ರಾಮದ ನಿವಾಸಿಯಾಗಿರುವ ತೇಜ್‌ಪಾಲ್‌ ಸಿಂಗ್ ಉದಾವತ್, ತನ್ನ ಫಾರ್ಮ್‌ ಹೌಸ್‌ನಲ್ಲಿ ಜೆಸಿಬಿ ಯಂತ್ರಗಳು ಮತ್ತು ಡಂಪರ್‌ಗಳನ್ನು ಹೊಂದಿದ್ದು, ಅಕ್ರಮವಾಗಿ ಜಲ್ಲಿಕಲ್ಲು ಗಣಿಗಾರಿಕೆ ಮತ್ತು ಸಾಗಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ. ಈತನ ವಿರುದ್ಧ ರಾಯಪು‌ರ್ ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಸುಮಾರು ಮೂರು ತಿಂಗಳ ಹಿಂದೆ ಡೀಸೆಲ್ ಕಳ್ಳತನದ ಶಂಕೆಯ ಮೇಲೆ ತನ್ನದೇ ಜೆಸಿಬಿ ಚಾಲಕನಿಗೆ ಈ ರೀತಿಯ ಶಿಕ್ಷೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಈ ಕ್ರೂರ ವಿಡಿಯೋ ವೈರಲ್ ಆದ ಕೂಡಲೇ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹೋಟ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸರಾ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಾಜಸ್ಥಾನದಲ್ಲಿ ಬಿಜೆಪಿ ಅಲ್ಲ, ಮಾಫಿಯಾಗಳ ಆಡಳಿತ ನಡೆಯುತ್ತಿದೆ” ಎಂದು ಈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಭೀಕರ ಘಟನೆಗಳು ಈ ಹಿಂದೆ ನಡೆದಿವೆ. ಮಾಫಿಯಾಗಳ ದಾಂಧಲೆ ಉತ್ತುಂಗದಲ್ಲಿದ್ದು, ಬಿಜೆಪಿಯ ದುರ್ಬಲ ಮತ್ತು ನಿರ್ಲಕ್ಷ್ಯದ ಆಡಳಿತದಿಂದಾಗಿ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಮಾಜಿ ಸಿಎಂ ಅಶೋಕ್ ಗೆಹೋಟ್, ಚಿತ್ರಹಿಂಸೆ ನೀಡಿದ ಆರೋಪಿಯ ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದಾರೆ.

ವಿಡಿಯೋ ಬೆಳಕಿಗೆ ಬಂದ ನಂತರ, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ರೌಡಿಶೀಟ‌ರ್ ತೇಜ್‌ಪಾಲ್ ಸಿಂಗ್ ಉದಾವತ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ರಾಜಸ್ಥಾನದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts