ಪುತ್ತೂರು: ಪೆರ್ಲಂಪಾಡಿ ಬಳಿ ಆನೆ ದಾಳಿ ನಡೆದಿದ್ದು, ಮಹಿಳೆಯೋರ್ವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದೆ.
ಪೆರ್ಲಂಪಾಡಿಯ ಕಣಿಯಾರು ಬಳಿ ಟ್ಯಾಪಿಂಗ್ ನಡೆಸುತ್ತಿದ್ದಾಗ ಆನೆ ದಾಳಿ ನಡೆಸಿದೆ. ಟ್ಯಾಪಿಂಗ್ ನಡೆಸುತ್ತಿದ್ದ ಮಹಿಳೆ, ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಆನೆ ಒಂಟಿಯಾಗಿತ್ತು ಎಂದು ಬಲ್ಲವರು ತಿಳಿಸಿದ್ದಾರೆ.